ಶಿರಾಳಕೊಪ್ಪ ಪೋಲೀಸ್ ಠಾಣೆ ಎದುರು ಭಜನೆ ಮಾಡುವ ಮೂಲಕ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ..!
![ಶಿರಾಳಕೊಪ್ಪ ಪೋಲೀಸ್ ಠಾಣೆ ಎದುರು ಭಜನೆ ಮಾಡುವ ಮೂಲಕ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ..!](https://shikarinews.com/wp-content/uploads/2024/02/IMG-20240205-WA0033.jpg)
ಶಿರಾಳಕೊಪ್ಪ : ಹಿಂದೂ ಸಂಘಟನೆ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ಕರೆಸಿ ಬೆದರಿಕೆ ಹಾಕಲಾಗಿದೆ ಈ ನೀತಿಯನ್ನು ಪೋಲಿಸರು ಕೈಬಿಡಬೇಕೆಂದು ಆಗ್ರಹಿಸಿದ ಹಿಂದೂ ಜಾಗರಣ ವೇದಿಕೆ ಸೋಮವಾರ ರಾತ್ರಿ ಪೋಲಿಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
![](https://shikarinews.com/wp-content/uploads/2024/02/IMG-20240205-WA0029-1024x768.jpg)
ಜಿಲ್ಲಾ ಸಂಚಾಲಕ ದೇವರಾಜ್ ಅರಳಿಹಳ್ಳಿ ಮಾತನಾಡಿ ಗೋ ಹತ್ಯೆ ಕಳ್ಳರ ವಿರುದ್ದ ಕ್ರಮ ಕೈಗೊಳ್ಳದೆ ಇದ್ದ ಸಂದರ್ಭದಲ್ಲಿ ಜಾಗೃತ ಹಿಂದೂ ಸಮಾಜ ರಸ್ತೆಗೆ ಇಳಿದು ಕಾನೂನು ಬದ್ಧ ಜನಾಂದೋಲನ ಚಳುವಳಿಯನ್ನು ಆರಂಭಿಸಲು ಸಿದ್ದರಿದ್ದೇವೆ .
![](https://shikarinews.com/wp-content/uploads/2024/02/IMG-20240205-WA0033-1024x461.jpg)
ಈ ವಿಚಾರವಾಗಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕಾಗಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಗೋ ಹತ್ಯೆ ನಡೆಯುತ್ತಿರುವುದು ಹಿಂದುಗಳ ಭಾವನೆಗೆ ಧಕ್ಕೆ ತರುವಂತ ವಿಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
![](https://shikarinews.com/wp-content/uploads/2024/02/IMG-20240205-WA00291-1024x768.jpg)
ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಶಿವಕುಮಾರ್ಣ ಪವನ್, ಪ್ರದೀಪ್,ಸುಧೀಂದ್ರ ಸದ್ಗುಣ, ಲೋಕೇಶ್, ವಿನಯ್, ಮುಂತಾದ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.