ಶಿರಾಳಕೊಪ್ಪ ಪೋಲೀಸ್ ಠಾಣೆ ಎದುರು ಭಜನೆ ಮಾಡುವ ಮೂಲಕ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ..!

ಶಿರಾಳಕೊಪ್ಪ ಪೋಲೀಸ್ ಠಾಣೆ ಎದುರು ಭಜನೆ ಮಾಡುವ ಮೂಲಕ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ..!

ಶಿರಾಳಕೊಪ್ಪ : ಹಿಂದೂ ಸಂಘಟನೆ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ಕರೆಸಿ ಬೆದರಿಕೆ ಹಾಕಲಾಗಿದೆ ಈ ನೀತಿಯನ್ನು ಪೋಲಿಸರು ಕೈಬಿಡಬೇಕೆಂದು ಆಗ್ರಹಿಸಿದ ಹಿಂದೂ ಜಾಗರಣ ವೇದಿಕೆ ಸೋಮವಾರ ರಾತ್ರಿ ಪೋಲಿಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಸಂಚಾಲಕ ದೇವರಾಜ್ ಅರಳಿಹಳ್ಳಿ ಮಾತನಾಡಿ ಗೋ ಹತ್ಯೆ ಕಳ್ಳರ ವಿರುದ್ದ ಕ್ರಮ ಕೈಗೊಳ್ಳದೆ ಇದ್ದ ಸಂದರ್ಭದಲ್ಲಿ ಜಾಗೃತ ಹಿಂದೂ ಸಮಾಜ ರಸ್ತೆಗೆ ಇಳಿದು ಕಾನೂನು ಬದ್ಧ ಜನಾಂದೋಲನ ಚಳುವಳಿಯನ್ನು ಆರಂಭಿಸಲು ಸಿದ್ದರಿದ್ದೇವೆ .

ಈ ವಿಚಾರವಾಗಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕಾಗಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಗೋ ಹತ್ಯೆ ನಡೆಯುತ್ತಿರುವುದು ಹಿಂದುಗಳ ಭಾವನೆಗೆ ಧಕ್ಕೆ ತರುವಂತ ವಿಚಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಶಿವಕುಮಾರ್ಣ ಪವನ್, ಪ್ರದೀಪ್,ಸುಧೀಂದ್ರ ಸದ್ಗುಣ, ಲೋಕೇಶ್, ವಿನಯ್, ಮುಂತಾದ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

Admin

Leave a Reply

Your email address will not be published. Required fields are marked *

error: Content is protected !!