ಶಿಕಾರಿಪುರ ತಾಲ್ಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಿ: ಶಾಸಕ ಬಿವೈ ವಿಜಯೇಂದ್ರ
![ಶಿಕಾರಿಪುರ ತಾಲ್ಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಿ: ಶಾಸಕ ಬಿವೈ ವಿಜಯೇಂದ್ರ](https://shikarinews.com/wp-content/uploads/2023/08/FB_IMG_1693044048819.jpg)
ಶಿಕಾರಿಪುರ: ತಾಲೂಕನ್ನು ಬರ ಪೀಡಿತ ತಾಲೂಕು ಎಂದು ಘೋಷಿಸುವಂತೆ ಶಾಸಕ ಬಿವೈ ವಿಜಯೇಂದ್ರ ಒತ್ತಾಯಿಸಿ ಪಟ್ಟಣದ ತಾಲೂಕ್ ಕಛೇರಿ ಎದುರು ತಾಲೂಕ್ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
![](https://shikarinews.com/wp-content/uploads/2023/08/FB_IMG_1693044067087.jpg)
ಈ ವೇಳೆ ಶಾಸಕ ಬಿವೈ ವಿಜಯೇಂದ್ರ ಮಾತನಾಡಿ
ರಾಜ್ಯ ಸರ್ಕಾರ ಕುಂಭಕರ್ಣನ ನಿದ್ದೆಯಲ್ಲಿದೆ ಬಡೆದೆಬ್ಬಿಸುವ ಕೆಲಸ ಈ ಹೋರಾಟದ ಮೂಲಕ ಶಿಕಾರಿಪುರ ತಾಲೂಕಿನಲ್ಲಿ ಆರಂಭವಾಗಿದೆ ರಾಜ್ಯದಲ್ಲಿ ರೈತರು ಮಳೆ ಇಲ್ಲದೆ ಕಂಗಾಲಾಗಿದ್ದಾರೆ 75-80ರಷ್ಟು ಮಳೆ ಕೊರತೆ ಕಂಡು ಬಂದಿದ್ದು ರೈತರು ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.
![](https://shikarinews.com/wp-content/uploads/2023/08/FB_IMG_1693044052052.jpg)
ತಾಲೂಕಿನಲ್ಲಿ ಶೇ 50% ಮೆಕ್ಕೆಜೋಳ ಬೆಳೆ ಹಾಳಗಿದೆ
ಭತ್ತ ಬಿತ್ತನೆಯಾಗಿಲ್ಲ ಏತ ನೀರಾವರಿ ಜಾರಿ ಆದರೂ ವಿದ್ಯುತ್ ಕಡಿತದಿಂದ ನೀರು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಅದರಲ್ಲೂ ಮೊದಲೇ 100 ಕೆರೆಗಳಿಗೆ ನೀರು ತುಂಬಿಸಲಾಗಿದೆ ರೈತರಿಗೆ ಸರ್ಕಾರ 7-8 ತಾಸು ಸಮರ್ಪಕವಾಗಿ ವಿದ್ಯುತ್ ನೀಡಬೇಕು ಬೆಳೆ ವಿಮೆ ಕಟ್ಟಿರುವ ರೈತರಿಗೆ ತಕ್ಷಣ ಮಧ್ಯಂತರ ಬೆಳೆ ವಿಮೆ ನೀಡಬೇಕು ಎಂದರು.
![](https://shikarinews.com/wp-content/uploads/2023/08/FB_IMG_1693044059236.jpg)
ಸರ್ಕಾರ ರೈತರ ಸಾಕಷ್ಟದ ಬಗ್ಗೆ ಕಾಳಜಿ ಇಲ್ಲ ರೈತರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ ಸರ್ಕಾರದ ಬಂದ ಮೊದಲನೇ ದಿನವೇ ರೈತರಿಗೆ ನೀಡುವ ಫಸಲ್ ಭೀಮಾ ಯೋಜನೆಗೆ 4000 ಹಣವನ್ನು ನಿಲ್ಲಿಸಿದ್ದಾರೆ.
![](https://shikarinews.com/wp-content/uploads/2023/08/FB_IMG_1693044062261.jpg)
ಶಿಕಾರಿಪುರದಲ್ಲಿ ಆರಂಭ ಆಗಿರು ಈ ಹೋರಾಟ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಇಡೀ ರಾಜ್ಯ ವ್ಯಾಪಿ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹೆಚ್ ಟಿ ಬಳಿಗಾರ್ ,ತಾಲೂಕ್ ಅಧ್ಯಕ್ಷ ವಿರೇಂದ್ರ ಪಾಟೀಲ್, ಕೆ.ಎಸ್ ಗುರುಮೂರ್ತಿ, ಪ್ರೇಮಕುಮಾರ್ ಗೌಡ, ಅಶೋಕ, ಹಾಲಪ್ಪ, ಮೋಹನ್, ಗಾಯಿತ್ರಿ ಮಲ್ಲಪ್ಪ, ನಿವೇದಿತಾ, ರೇಖಾ ಇದ್ದರು.
News By: Raghu Shikari-7411515737