ಕೆಎಸ್ಆರ್ ಟಿಸಿಗೆ ಶೀಘ್ರದಲ್ಲಿ 13 ಸಾವಿರ ಹುದ್ದೆಗಳ ನೇಮಕ : ಸಚಿವ ರಾಮಲಿಂಗಾರೆಡ್ಡಿ
ದಾವಣಗೆರೆ: ಶೀಘ್ರದಲ್ಲಿ 13 ಸಾವಿರ ದಷ್ಟು ಹುದ್ದೆಗಳ ನೇಮಕ ಮಾಡಿಕೊಳ್ಳ ಲಾಗುವುದು ಎಂದು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ 13 ಸಾವಿರ ಹುದ್ದೆಗಳ ನೇಮಕಾತಿ ಜೊತೆಗೆ 5 ಸಾವಿರ ಹೊಸ ಬಸ್ ಖರೀದಿಸಲಾಗುವುದು. ಹುದ್ದೆಗಳ ನೇಮಕ, ಬಸ್ ಖರೀದಿ ನಂತರ ಕೊರೊನಾ ಕಾರಣಕ್ಕಾಗಿ ಗ್ರಾಮಾಂತರ ಭಾಗದಲ್ಲಿ ಸ್ಥಗಿತಗೊಳಿಸ ಲಾಗಿದ್ದ ಬಸ್ ಸಂಚಾರ ಪುನಾರಂಭಗೊಳಿಸಲಾಗುವುದು ಎಂದರು.
ಶಕ್ತಿ ಯೋಜನೆಯಿಂದ ಸಂಸ್ಥೆಗೆ ನಷ್ಟ ಆಗುವುದಿಲ್ಲ ಯೋಜನೆ ಆರಂಭದ ನಂತರ 43 ಕೋಟಿಯಷ್ಟು ಮಹಿಳೆಯರು ಪ್ರಯಾಣ ಮಾಡಿದ್ದಾರೆ.
ಮಹಿಳೆಯರಿಂದಲೇ ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ ನಾಲ್ಕೂ ವಿಭಾಗದಿಂದ ರಾಜ್ಯದ ಎಲ್ಲ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
News By: Raghu Shikari-7411515737