ಶಿರಾಳಕೊಪ್ಪ: ಸತೀಶ್ ದಾವಣಗೆರೆ ಬಂಧನ‌ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ.!

ಶಿರಾಳಕೊಪ್ಪ: ಸತೀಶ್ ದಾವಣಗೆರೆ ಬಂಧನ‌ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ.!

ಶಿರಾಳಕೊಪ್ಪ : ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಹಿಂದು ಜಾಗರಣ ವೇದಿಕೆಯ ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರಿ ಅವರನ್ನು ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ ಖಂಡಿಸಿ ತಾಲೂಕ್ ಹಿಂದೂ ಜಾಗರಣಾ ‌ವೇದಿಕೆ ವತಿಯಿಂದ ಶಿರಾಳಕೊಪ್ಪ ಬಸ್ ನಿಲ್ದಾಣ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ್ದರು.

ಈ ವೇಳೆ ಜಿಲ್ಲಾ ಸಂಚಾಲಕ ದೇವರಾಜ್ ಮಾತನಾಡಿ ದೇಶದ ವಿಚಾರವಾಗಿ ಗೌರಿ ಬಿದನೂರಿನ ಅಖಂಡ ಭಾರತ ಸಂಕಲ್ಪ ದಿನದಂದು ರಾಷ್ಟ್ರೀಯ ನೈಜ ಸಂಗತಿಗಳನ್ನು ದಿಕ್ಸೂಚಿ ಭಾಷಣದಲ್ಲಿ ಸತೀಶ್ ಅವರು ಮಾತನಾಡಿದ್ದಾರೆ ಅವರ ಮೇಲೆ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಸುಳ್ಳು ಕೇಸ್ ಅನ್ನು ದಾಖಲಿಸಿ ಯಾವುದೇ ನೋಟಿಸ್ ಜಾರಿ ಮಾಡದೆ ಏಕಾಏಕಿ ಬಂದು ಮಧ್ಯರಾತ್ರಿ ಬಂದಿಸಿರುವುದು ಸರ್ಕಾರದ ಹಿಂದೂ ವಿರೋಧಿ ನಡೆ ಎಂದು ಖಂಡಿಸಿದರು.

ದೇಶ ಕಾಯುವ ಸೈನಿಕರಿಗೆ ಸಂವಿಧಾನ ಮತ್ತು ಕಾನೂನು ಅಡಿಯಲ್ಲಿ ಕೆಲಸ ಮಾಡುವ ಪೊಲೀಸರಿಗೆ ಭಯೋತ್ಪಾದಕರಿಂದ ದೇಶದ್ರೋಹಿಗಳಿಂದ ಸಮಸ್ಯೆ ಆದರೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುವುದು ಹಿಂದೂ ಸಂಘಟನೆಯ ಕಾರ್ಯಕರ್ತರು ಮಾತ್ರ ಪೊಲೀಸ್ ನವರು ನೆನಪಿಟ್ಟುಕೊಳ್ಳಬೇಕೆಂದು ಎಂದರು.

ಈ ಸಂದರ್ಭದಲ್ಲಿ ‌ಹಿಂದೂ ಜಾಗರಣಾ ವೇದಿಕೆಯ ಪ್ರದೀಪ್‌‌, ಶರತ್, ಪವನ್,ಸುನೀಲ್, ಲೋಕೇಶ್ ಸಂತೋಷ್ ನಾಯ್ಕ್, ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!