10 ಕೆಜಿ ಅಕ್ಕಿಯಲ್ಲಿ 1 ಗ್ರಾಂ ಕಡಿಮೆಯಾದರೂ ಜನ ಒಪ್ಪಲ್ಲ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ
![10 ಕೆಜಿ ಅಕ್ಕಿಯಲ್ಲಿ 1 ಗ್ರಾಂ ಕಡಿಮೆಯಾದರೂ ಜನ ಒಪ್ಪಲ್ಲ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ](https://shikarinews.com/wp-content/uploads/2023/06/IMG_20230618_180136_829.jpg)
ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ಕಿ ವಿತರಣೆ ಗೊಂದಲ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ರಾಜ್ಯ ಸರ್ಕಾರ 10 ಕೆಜಿ ಉಚಿತ ಅಕ್ಕಿ ವಿತರಣೆ ಗ್ಯಾರಂಟಿ ಘೋಷಣೆ ಮಾಡಿತ್ತು ವಿತರಣೆಯಲ್ಲಿ ಒಂದು ಗ್ರಾಮ್ ಕಡಿಮೆಯಾದರು ಜನರು ಒಪ್ಪುವುದಿಲ್ಲ ಎಂದರು.
![](https://shikarinews.com/wp-content/uploads/2023/06/IMG-20230618-WA0048-1024x682.jpg)
ಅಕ್ಕಿ ವಿತರಣೆ ವಿಚಾರದಲ್ಲಿ ಕಾಂಗ್ರೆಸ್ ಉದ್ದೇಶ ಪೂರ್ವಕವಾಗಿ ಗೊಂದಲ ಉಂಟು ಮಾಡುತ್ತಿದೆ ಈಗಾಗಲೇ ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿ ಉಚಿತವಾಗಿ ಕೊಡುತ್ತಿದೆ ಹೆಚ್ಚುವರಿಯಾಗಿ ಅಕ್ಕಿ ಕೊಡಲಿಕ್ಕೆ ಕೇಂದ್ರ ಒಪ್ಪಿರಲಿಲ್ಲ.
![](https://shikarinews.com/wp-content/uploads/2023/06/IMG_20230618_180138_753.jpg)
ಈ ವಿಷಯವಾಗಿ ಕೇಂದ್ರ ಸರ್ಕಾರವನ್ನು ಅನಗತ್ಯ ದೂಷಣೆ ಮಾಡೋದು ಸರಿಯಲ್ಲ ಯಾವುದೇ ಸಮಯದಲ್ಲೂ ಮೋದಿಯವರು ಹೆಚ್ಚುವರಿ ಅಕ್ಕಿ ಕೊಡ್ತೇವೆ ಎಂದು ಹೇಳಿಲ್ಲ ಈಗ ಕೊಡ್ತಿರೊದು ಕೂಡ ಕೇಂದ್ರ ಸರ್ಕಾರ ಅದು ಉಚಿತವಾಗಿ ನೀಡುತ್ತಿದೆ ಆದರೆ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿಕೆ ಶಿವಕುಮಾರ್ ವಿನಾಃ ಕಾರಣ ಗೊಂದಲ ಉಂಟು ಮಾಡ್ತಿದ್ದಾರೆ. ಎಲ್ಲಿಯಾದ್ರು ತಂದು, ಗೊಂದಲ ಮಾಡದೇ ಅಕ್ಕಿ ವಿತರಣೆ ಮಾಡಲಿ ಎಂದರು.
News by: Raghu Shikari-7411515737