ಅಣ್ಣನ ಲವ್ ಕೇಸ್ ತಮ್ಮ ಬಲಿ ಹಾನಗಲ್‌ ಪೋಲಿಸರ ಟಾರ್ಚರ್ ಕಾರಣನಾ..?

ಅಣ್ಣನ ಲವ್ ಕೇಸ್ ತಮ್ಮ ಬಲಿ ಹಾನಗಲ್‌ ಪೋಲಿಸರ ಟಾರ್ಚರ್ ಕಾರಣನಾ..?

ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿತಾಂಡದ‌ ಯುವಕ‌ ಸುರೇಶ್ ನಾಯ್ಕ್ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಕುಟುಂಬಸ್ಥರು ಹಾನಗಲ್ ಪೋಲಿಸರ ಕಿರಕುಳದಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.

ಮೃತ ಯುವಕ‌ ಸುರೇಶ್ ನಾಯ್ಕ್

ಏನಿದು ಪ್ರಕರಣ:
ಹಾನಗಲ್‌ ತಾಲೂಜಿನ ಬಾಳೂರು ತಾಂಡ ಯುವತಿಯನ್ನು ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡ ಯುವಕ ಮಂಜುನಾಯ್ಕ್ ಪ್ರೀತಿ ಮಾಡುತ್ತಿದ ಕಳೆದ 8 ವರ್ಷಳಿಂದ ಇಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದ್ದು ಇತ್ತೀಚೆಗೆ ಯುವತಿ ಪ್ರೀತಿಯನ್ನು ನಿರಾಕರಿಸಿದರು ಎನ್ನಲಾಗಿದ್ದು ಈ ವಿಷಯಕ್ಕೆ ಯುವಕ ಗಲಾಟೆ ಮಾಡಿದ್ದ ಎನ್ನಲಾಗಿದೆ.

ಕೆಲ ದಿನಗಳ ಹಿಂದೆ ಯುವತಿಯ ವಿವಾಹ ಬೇರೆ ಹುಡಗನ ಜೊತೆ ಮಾಡಿಕೊಡಲಾಗಿತ್ತು ಅದ್ದರಿಂದ ಯುವತಿ ಮನೆಯವರು ಮೃತ ಯುವಕನ‌ ಅಣ್ಣನ ಮೇಲೆ ದೂರು ದಾಖಲಿಸಿದರು.

ಪೋಲಿಸರ ಟಾರ್ಚರ್..??
ದೂರಿನ ಅನ್ವಯ ಪೋಲಿಸರು ಆರೋಪಿ ಮಂಜುನಾಯ್ಕ್ ಪತ್ತೆಗೆ ಮುಂದಾಗಿದ್ದು ಆರೋಪಿ ಸಿಗಲಿಲ್ಲ ಆದ ಕಾರಣ ಬೆಂಗಳೂರಿನಲ್ಲಿ ಬಾಡಿಗೆ ಕಾರು ಒಡಿಸುತ್ತಿದ ಅವರ ತಮ್ಮ ಸುರೇಶ್ ನನ್ನು ಕಾರು ಸಮೇತ ಠಾಣೆಗೆ ಕರೆ ತಂದಿದ್ದಾರೆ.
ವಿಚಾರಣೆ ನಡೆಸಿದಾಗ ಅಣ್ಣ ಮಂಜುನಾಯ್ಕ್ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ನಿನ್ನ ಅಣ್ಣ ಸಿಗುವ ವರೆಗೂ ಕಾರು ವಾಪಸ್ಸು ಕೊಡುವುದಿಲ್ಲ ಎಂದು ಪೋಲಿಸರು ಹೇಳಿದ್ದಾರೆ ಎನ್ನಲಾಗಿದ್ದು ಇದೆ ಕಾರಣಕ್ಕೆ ಜೀವನಾಧಾರವಾಗಿದ ಕಾರು ಇಲ್ಲ ಸಾಲವನ್ನು ತಿರಿಸಲು ಆಗುವುದಿಲ್ಲ ಎಂದು ಮನನೊಂದು ಹಂಸಭಾವಿಯಲ್ಲಿ ಸುರೇಶ್ ನಾಯ್ಕ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಯುವತಿ ಕುಟುಂಬ ಪೋಲಿಸರ ಮೇಲೆ ಡೇತ್ ನೋಟ್ ಬರೆದಿಟ್ಟು ಸುರೇಶ್ ನಾಯ್ಕ್ ಆತ್ಮಹತ್ಯೆ

ನಾನು ಸ್ನೇಹಿತರ ಬಳಿ ಮತ್ತು ಸಂಬಂಧಿಕರ ಬಳಿ ಸೇರಿ ಹತ್ತಾರು ಕಡೆಯಲ್ಲಿ ಲಕ್ಷಗಟ್ಟಲೆ ಸಾಲ ಮಾಡಿರುತ್ತೇನೆ ನನಗೆ ಸಾಲವನ್ನು ತಿರಿಸಲು ಇರುವ ಮಾರ್ಗ ನನ್ನ ದುಡಿಮೆ ಅದು ಕಾರು ಅದನ್ನು ಪೋಲಿಸರು ಇಟ್ಟುಕೊಂಡಿದ್ದಾರೆ ನನಗೆ ಇಷ್ಟು ಕಿರುಕುಳ ನೀಡಲು ಯುವತಿಯ ಕುಟುಂಬ ಮತ್ತು ಪೋಲಿಸರು ಕಾರಣ ನನ್ನ ಸಾಲದ ಹಣವನ್ನು ಇವರಿಂದಲ್ಲೇ ವಸೂಲಿ ಮಾಡಬೇಕು ಎಂದು ಡೇತ್ ನೊಟ್ ಬರೆದಿಟ್ಟು ಸುರೇಶ್ ನಾಯ್ಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!