ಶಿಕಾರಿಪುರ :ಡಾ.ಮೌಲನ ಅಫೀಜ್ ಕರ್ನಾಟಕಿ ಅವರ 100 ನೇ ಪುಸ್ತಕ ಬಿಡುಗಡೆ ಸಮಾರಂಭ..
ಶಿಕಾರಿಪುರ : ಪಟ್ಟಣದ ಜುಬೇದ ವಿದ್ಯಾಸಂಸ್ಥೆಯ ಸಂಸ್ಥಾಪಕರುರಾದ ಉರ್ದು ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ.ಮೌಲನ ಅಮ್ಜದ್ ಅಫೀಜ್ ಕರ್ನಾಟಕಿ ಅವರು ರಚಿಸಿರುವ 100 ನೇ ಪುಸ್ತಕ ಬಿಡುಗಡೆ ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಇದೆ ತಿಂಗಳ 25ರಂದು ನಡೆಲಿದೆ ಎಂದರು ಡಾ.ಅಫೀಜ್ ಕರ್ನಾಟಕಿ ಅಭಿಮಾನಿ ಬಳಗದ ಸಂಚಾಲಕರಾದ ಕೆ.ಎಸ್ ಹುಚ್ಚರಾಯಪ್ಪ ತಿಳಿಸಿದರು.
ಪಟ್ಟಣ ಪತ್ರಿಕ ಭವನದಲ್ಲಿ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಇಡೀ ದೇಶದ ಸಾಹಿತಿಗಳನ್ನು ಶಿಕಾರಿಪುರ ನಗರ ಕ್ಕೆ ಕರೆತರುವ ಉದ್ದೇಶದಿಂದ ಡಾ.ಅಫೀಜ್ ಕರ್ನಾಟಕಿ ಅವ ರು ತಮ್ಮ 100 ನೇ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ 100 ಜನ ಸಾಧಕರಿಗೆ ಸನ್ಮಾನ ಅಮ್ಮಿಕೊಂಡಿದ್ದಾರೆ.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ,ಸಂಸದ ಬಿವೈ ರಾಘವೇಂದ್ರ ಸೇರಿದಂತೆ ಸ್ಥಳೀಯ ನಾಯಕರು ಭಾಗವಹಿಸಲಿದ್ದಾರೆ.
3 ದಿನಗಳ ಕಾಲ ಕಾರ್ಯಕ್ರಮ ವಿಚಾರಗೊಷ್ಠಿ ನಡೆಯಲಿದೆ ದೇಶದ ವಿವಿಧ ಭಾಗಗಳಿಂದ ಕನ್ನಡ ಉರ್ದು ಕವಿಗಳು ಸಾಹಿತಿಗಳು ಆಗಮಿಸಲಿದ್ದಾರೆ.
ದಿನಾಂಕ ’25 ಸಾಂಸ್ಕೃತಿಕ ಭವನ ಉದ್ಘಾಟನೆ ಮತ್ತು
26 -27 ರಂದು ಜುಬೇದ ಶಾಲೆ ಆವರಣದಲ್ಲಿ ಕಾರ್ಯಕ್ರಮ ವಿಚಾರಗೊಷ್ಠಿ ನಡೆಯಲಿದೆ ಪ್ರತಿಯೊಬ್ಬರು ಈ ಕಾರ್ಯಕ್ರಮಗಳಿಗೆ ಆಗಮಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ
ಡಾ ಅಫಜ್ ಕರ್ನಾಟಕಿ ಅಭಿಮಾನಿ ಬಳಗದ ಅಧ್ಯಕ್ಷ ಫಯಾಜ್ ಅಹ್ಮದ್ ,ಜುಬೇದವಿದ್ಯಾಸಂಸ್ಥೆಯ ಪ್ರತೀಮಾ, ವೆಂಕಟೇಶ, ಸವಿತ , ಶೈಲಾಜ, ಡಾ.ಅಫೀಜ್ ಕರ್ನಾಟಕಿ ಅಭಿಮಾನಿ ಸದಸ್ಯರು ಇದ್ದರು.
News by Raghu Shikari-7411515737