4 ವರ್ಷದ ಬಾಲಕನ ಮೇಲೆ ಬೀದಿನಾಯಿಗಳ ದಾಳಿ ಬಾಲಕ ಸಾವು…!!!
![4 ವರ್ಷದ ಬಾಲಕನ ಮೇಲೆ ಬೀದಿನಾಯಿಗಳ ದಾಳಿ ಬಾಲಕ ಸಾವು…!!!](https://shikarinews.com/wp-content/uploads/2022/12/20221201_072251.jpg)
ಭದ್ರಾವತಿ : ಬೀದಿ ನಾಯಿಗಳ ದಾಳಿಯಿಂದ ನಾಲ್ಕು ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕಿನ ದಡಮಘಟ್ಟ ಗ್ರಾಮದಲ್ಲಿ ನಡೆದಿದೆ .
ಸಂಜೆ ನಾಲ್ಕು ಗಂಟೆಗೆ ಮನೆಯಿಂದ ಹೊರಗೆ ಆಟವಾಡಲು ಬಂದಾಗ ಏಕಾಏಕಿ ಹತ್ತಾರು ನಾಯಿಗಳು ಸೈಯದ್ ಮದನಿ ನಾಯಿಗಳ ದಾಳಿಗೆ ಬಲಿಯಾದ ಬಾಲಕನ ಮೇಲೆ . ಒಂದೇ ಸಮನೆ ದಾಳಿ ನಡೆಸಿವೆ .
ದಾಳಿಗೆ ಹೆದರಿದ ಮದನಿ ನೆಲಕ್ಕೆ ಬಿದ್ದಿದ್ದಾನೆ ರಸ್ತೆ ತುಂಬೆಲ್ಲಾ ಎಳೆದಾಡಿ ಎಲ್ಲ ನಾಯಿಗಳು ಆತನನ್ನು ಕಚ್ಚಿ ಹಾಕಿವೆ .
![](https://shikarinews.com/wp-content/uploads/2022/11/IMG_20221127_204809_181.jpg)
ಬಾಲಕ ಮದನಿ ನಾಯಿಗಳ ದಾಳಿಗೆ ಸಿಲುಕಿ ಕೂಗಿಕೊಂಡರೂ ಸಹ ಮನೆಯವರಿಗೆ ಗೊತ್ತಿಲ್ಲ . ನಾಯಿಗಳು ಏಕಾಏಕಿ ಬೊಗಳುತ್ತಾ ಸಾಗಿವೆ . ಕೊನೆಗೆ ಮನೆಯವರು ಹೊರಗೆ ಬಂದು ನೋಡಿದಾಗ ನಾಯಿಗಳು ಬಾಲಕನನ್ನು ಕಚ್ಚುತ್ತಿರುವುದು ಕಂಡು ಕೋಲು ತೆಗೆದುಕೊಂಡು ಓಡಿಸಿದ್ದಾರೆ . ಅಷ್ಟರಲ್ಲಿ ಕ್ರೂರ ನಾಯಿಗಳು ಬಾಲಕನ ಒಡೆದ ತಲೆಯನ್ನು ಸೀಳಿ ಮೆದುಳನ್ನು ತಿಂದು ಹಾಕಿವೆ .
ತಕ್ಷಣ ಬಾಲಕನನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ . ಅಲ್ಲಿನ ವೈದ್ಯರ ಶಿಫಾರಸ್ಸಿನ ಮೇರೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದು ಕೊಂಡು ಬರುವಾಗ ಬಾಲಕ ಸೈಯದ್ ಮದನಿ ದಾರಿಯಲ್ಲಿಯೇ ಸಾವನ್ನಪ್ಪಿದ್ದಾನೆ . ಈ ಕುರಿತು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
![](https://shikarinews.com/wp-content/uploads/2022/12/768-512-17076675-thumbnail-3x2-ran.webp)
ನಾಯಿಗಳ ಹಾವಳಿ ತಪ್ಪಿಸಿ ಎಂದು ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ . ರಸ್ತೆಯಲ್ಲಿ ಒಬ್ಬರೇ ಓಡಾಡುವುದು ಸಹ ಕಷ್ಟವಾಗಿದೆ ಎಂದು ಮೃತ ಬಾಲಕ ಸೈಯದ್ ಮದನಿ ದೊಡ್ಡಪ್ಪ ಕಳೆದ ಕೆಲ ತಿಂಗಳ ಹಿಂದೆ ಇದೇ ರೀತಿ ಓರ್ವ ಬಾಲಕನಿಗೂ ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು . ಆತನನ್ನು ಆಸ್ಪತ್ರೆಗೆ ದಾಖಲಿಸಿ ಗುಣಪಡಿಸಿಕೊಂಡು ಹೋಗಲಾಗಿದೆ . ಆದರೆ , ಗ್ರಾಮ ಪಂಚಾಯಿತಿ ಅಧ್ಯಕ್ಷರು , ಸದಸ್ಯರು , ಪಿಡಿಓಗಳು ಈ ಬಗ್ಗೆ ಗಮನ ಹರಿಸದ ಪರಿಣಾಮ ನನ್ನ ಸಹೋದರನ ಮಗ ಸಾವನ್ನಪ್ಪಿದ್ದಾನೆ ಎಂದು ಹೇಳಿದರು.
News by Raghu shikari-7411515737