ಮಾರಿಕಾಂಬ ಜಾತ್ರಾ ಮಹೋತ್ಸವ ಖರ್ಚು ವೆಚ್ಚ ವಿವರ ಪ್ರಕಟ..!
![ಮಾರಿಕಾಂಬ ಜಾತ್ರಾ ಮಹೋತ್ಸವ ಖರ್ಚು ವೆಚ್ಚ ವಿವರ ಪ್ರಕಟ..!](https://shikarinews.com/wp-content/uploads/2022/11/20221124_190630.jpg)
ಶಿಕಾರಿಪುರ ಪಟ್ಟಣದ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಧ್ಯಕ್ಷರಾದ
ಮಹೇಶ್ ಹುಲ್ಮಾರ್ ಈ ವರ್ಷದ ಜಾತ್ರೆಯ ಜಮಾ ಖರ್ಚು ವಿವರವನ್ನು ಸಾರ್ವಜನಿಕರಿಗೆ ಪ್ರಕಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಅದ್ದೂರಿ ಜಾತ್ರೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಅದರೆ ಕರೋನ ಕಾರಣದಿಂದ ಜಾತ್ರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು
![](https://shikarinews.com/wp-content/uploads/2022/11/IMG-20221124-WA0007.jpg)
ದೇಣಿಗೆ ಸಂಗ್ರಹ ಕಡಿಮೆ ಅಗಿದ್ದು ಅನೇಕ ಅಂಗಡಿಯ ಮಾಲೀಕರು ದೇಣಿಗೆ ನೀಡಿಲ್ಲ ಎಂದರು.
ಪಟ್ಟಣದ ವಾರ್ಡ್ ಕೇರಿವಾರು ಜನರು ಜಾತ್ರೆಗೆ ದೇಣಿಗೆ ನೀಡಿದ್ದು ಸಮಸ್ತ ವ್ಯಾಪಾರಿಗಳು ಜನತೆಗೆಗೂ ಧನ್ಯವಾದಗಳು ಸಲ್ಲಿಸಿದರು.
ಈ ಬಾರಿ ಎಲ್ಲಾ ರೀತಿಯ ಖರ್ಚು ತೆಗೆದು 5,86,870 ಹಣವನ್ನು ಉಳಿತಾಯವಾಗಿದೆ ಎಂದರು.
ದೇವಸ್ಥಾನಕ್ಕೆ ಯಾವುದೇ ಆದಾಯ ಇರುವುದಿಲ್ಲ ಅದ್ದರಿಂದ ದೇವಸ್ಥಾನ ಸಮಿತಿಯವರು ವಣಿಜ್ಯ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದು ಸಂಸದ ಬಿ ವೈ ರಾಘವೇಂದ್ರ ಅವರು ಶಂಕುಸ್ಥಾಪನೆ ಮಾಡಿದ್ದಾರೆ.
![](https://shikarinews.com/wp-content/uploads/2022/11/IMG-20221124-WA0007-1.jpg)
ದೇವಸ್ಥಾನ ಸಮಿತಿ ವತಿಯಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕು ಸಮುದಾಯದ ಭವನ ಆದಾಯ ಬರುವುದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದರು.
ಈ ಸಂದರ್ಭದಲ್ಲಿ ಸಮಿತಿಯ ಹೊಲಗಾವಲು ಮಲ್ಲಪ್ಪ,ಪ್ರ.ಕಾ. ಪರಿವಾಳದ ಶಿವಶಂಕರಪ್ಪ, ಗುಳ್ಯಪ್ಪ, ಶಿವನಗೌಡ್ರು, ಕೆ.ಹಾಲಪ್ಪ, ಮಹೇಶ್ ಹುಲ್ಮಾರ್, ಗಿರೀಶ್ ,ಶ್ರೀಕಾಂತ್, ಸಂದೀಪ್ ,ಪ್ರಶಾಂತ್ ಇದ್ದರು.
News by Raghu shikari-7411515737