ಮೋಬೈಲ್ ಚಾರ್ಜರ್ ಗಲಾಟೆ ಸಾವಿನಲ್ಲಿ ಅಂತ್ಯ..!!!
ಮೋಬೈಲ್ ಚಾರ್ಜರ್ ಗಲಾಟೆಯ ಸಾವಿನಲ್ಲಿ ಅಂತ್ಯವಾದ ಘಟನೆ ಬುಧವಾರ ಸಾಗರ ತಾಲೂಕಿನ ಮುರಳ್ಳಿ ಮರಾಠಿ ಗ್ರಾಮದಲ್ಲಿ ನಡೆದಿದೆ.
ಸಾಗರ ತಾಲೂಕಿನ ಮುರಳ್ಳಿ ಮರಾಠಿ ಗ್ರಾಮದ ವಾಸಿ ತಿಮ್ಮಪ್ಪನ ಮನೆಗೆ ಅದೇ ಗ್ರಾಮದ ವಾಸಿ ಸಿದ್ದಪ್ಪ ತನ್ನ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಬಂದಿದ್ದು ಈ ವಿಚಾರದಲ್ಲಿ ಸಿದ್ದಪ್ಪನು ತಿಮ್ಮಪ್ಪನ ಹೆಂಡತಿ ಮತ್ತು ತಿಮ್ಮಪ್ಪನ ಜೋತೆ ಗಲಾಟೆ ಶುರುವಾಗಿದ್ದು. ಅಲ್ಲೇ ಇದ್ದ ದೊಣ್ಣೆಯನ್ನು ತೆಗೆದುಕೊಂಡು ಮನೆಗೆ ಅಳವಡಿಸಿದ ಡಿಶ್ ಪುಟ್ಟಿಗೆ ಸಿದ್ದಪ್ಪ ಹೊಡೆಯುತ್ತಿರುತ್ತಾನೆ ಇದನ್ನು ಪ್ರಶ್ನಿಸಿದ ತಿಮ್ಮಪ್ಪನಿಗೆ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಹೊಡೆದು ಗಾಯಪಡಿಸಿದ್ದಾನೆ ಎನ್ನಲಾಗಿದೆ. ನಂತರ ತಿಮ್ಮಪ್ಪನು ಸೋಮವಾರ ಆಸ್ಪತ್ರೆಗೆ ದಾಖಲಾಗಿರುತ್ತಾನೆ.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಉಡುಪಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಈ ಕುರಿತು ಮೃತನ ಪತ್ನಿ ಸಾಗರದ ಕಾರ್ಗಲ್ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿರುತ್ತಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಸಿದ್ದಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.
News by Raghu shikari-7411515737