ಅಧಿಕಾರಿಗಳ ಕಿರುಕುಳ: ಬೇಸತ್ತ  ದಂಪತಿ ದಯಾಮರಣ ಕೇಳಿ ಮನವಿ…!!

ಅಧಿಕಾರಿಗಳ ಕಿರುಕುಳ: ಬೇಸತ್ತ  ದಂಪತಿ ದಯಾಮರಣ ಕೇಳಿ ಮನವಿ…!!

ಸಾಗರ : ಜಮೀನಿನ ವಿಚಾರದಲ್ಲಿ ಕೆಲ ಸರಕಾರಿ ಅಧಿಕಾರಿಗಳು ನೀಡುತ್ತಿರುವ ಕಿರುಕುಳದಿಂದ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವ ತಾಲೂಕಿನ ಕುಗ್ವೆ ಗ್ರಾಮದ ಶ್ರೀಕಾಂತ್ ನಾಯಕ್ ದಂಪತಿ ದಯಾಮರಣಕ್ಕೆ ಅವಕಾಶ ನೀಡುವಂತೆ ಕೋರಿ ಉಪವಿಭಾಗಾಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ಕುಗ್ವೆ ಗ್ರಾಮದ ಶ್ರೀಕಾಂತ್ ನಾಯಕ್ ಹಾಗೂ ಸುಜಾತಾ ನಾಯಕ್ ದಂಪತಿ ಬುಧವಾರ ಉಪವಿಭಾಗಾಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ದಯಾಮರಣಕ್ಕೆ ಅನುಮತಿ ಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ.


ಈ ಕುರಿತು ಮಾತನಾಡಿದ ಅವರು, ನಮ್ಮ ಸ್ವಂತದ ಜಮೀನಿನಲ್ಲಿ ನಗರ ಹಾಗೂ ಗ್ರಾಮಾಂತರ ಯೋಜನೆಯಡಿ ಅನುಮೋದನೆಗೊಂಡ ಶೇ. 52ರಷ್ಟು ನಿವೇಶನಗಳನ್ನು ಬಿಡುಗಡೆ ಮಾಡಲು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು 10ಲಕ್ಷ ರೂ. ಲಂಚ ಕೇಳಿದ್ದರು. ಬಡ ರೈತ ಕುಟುಂಬದ ಹಿನ್ನೆಲೆಯ ನಾನು ಲಂಚ ನೀಡಿಲ್ಲ. ಇದೇ ಕಾರಣಕ್ಕಾಗಿ ಅವರು ಅಧಿಕಾರ ದುರ್ಬಳಕೆ ಮಾಡಿ, ಕುಟುಂಬಕ್ಕೆ ಆರ್ಥಿಕ ನಷ್ಟವಾಗುವಂತೆ ಮಾಡಿದ್ದಾರೆ. ಇದರಿಂದಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ.

ಇಡೀ ಕುಟುಂಬದವರು ಮಾನಸಿಕವಾಗಿ ನೊಂದಿದ್ದು, ಅಸಹಾಯಕರಾಗಿ ಈಗ ದಯಾ ಮರಣ ಕೋರುವ ಪರಿಸ್ಥಿತಿಗೆ ಬಂದಿದ್ದೇವೆ ಎಂದರು.

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!