ಮಳೆಹಾನಿ ಮನೆ ಕಳೆದುಕೊಂಡವರಿಗೆ ಪರಿಹಾರ ಸಿಗುತ್ತಿಲ್ಲ : ರಾಘವೇಂದ್ರ ನಾಯ್ಕ್ ಆರೋಪ
ಶಿಕಾರಿಪುರ ತಾಲೂಕಿನಲ್ಲಿ ಮಳೆಹಾನಿ ಆಗಿರುವ ಮನೆ ಪರಿಹಾರ ಈ ವರೆಗೂ ಸಿಕ್ಕಿಲ್ಲ ಅಂಬಾರಗೊಪ್ಪ ,ಭದ್ರಾಪುರ, ದೂಪದಹಳ್ಳಿ ಶಿಕಾರಿಪುರ ತಾಲೂಕಿನಲ್ಲಿ ನೂರಾರು ಅರ್ಜಿಗಳು ವಿಲೆ ಆಗಿದೆ ಎಂದು ಪತ್ರಿಕಾ ಭವನದಲ್ಲಿ ಕಾಂಗ್ರೆಸ್ ಮುಖಂಡ ರಾಘವೇಂದ್ರ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೆದ ವರ್ಷ ಮೇ.ತಿಂಗಳ ಮನೆ ಹಾನಿಯಾದವರಿಗೆ 3200 ರೂ ನೀಡಿಲಾಗಿದೆ. ತಾಲೂಕಿನಲ್ಲಿ ದುರಾಡಳಿತ ನಡೆಯುತ್ತಿದೆ ಕಳೆದ ವರ್ಷ 47 ಮನೆಗಳು ಬಿದ್ದಿರುವವರಿಗೆ ಇನ್ನು ಪರಿಹಾರ ನೀಡಿಲ್ಲ.
ಮನೆ ಕಳೆದುಕೊಂಡವರಿಗೆ 5 ಲಕ್ಷ ನೀಡಬೇಕು ಎಂದು ಸರ್ಕಾರಹೇಳಿದೆ ಅದರೂ ಹಣ ಬಿಡುಗಡೆ ಆಗಿಲ್ಲ. ರಾಜಕಾರಣ ಇಟ್ಟುಕೊಂಡು ದ್ವೇಷದಿಂದ ಬಡಜನರಿಗೆ ಪರಿಹಾರ ನಿಲ್ಲಿಸಬೇಡಿ ನ್ಯಾಯ ಕೊಡಿ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಜಗದೀಶ್ ನಾಯ್ಕ್, ಮಂಜುನಯ್ಕ್, ಮುತ್ತುರಾಜ್,ಜಗದೀಶ್ ,ಪ್ರೇಮ್, ಇದ್ದರು.
News by Raghu Shikari-7411515737