ಶಿಕಾರಿಪುರ: ಕೇಂದ್ರ ಸರ್ಕಾರದ 8 ವರ್ಷದ ಆಡಳಿತ ಭಾರತ ಅತ್ಮನಿರ್ಭರದ ಕಡೆಗೆ ಸಾಗಿದೆ: ಸಂಸದ ಬಿವೈ ರಾಘವೇಂದ್ರ

ಶಿಕಾರಿಪುರ: ಕೇಂದ್ರ ಸರ್ಕಾರದ 8 ವರ್ಷದ ಆಡಳಿತ ಭಾರತ ಅತ್ಮನಿರ್ಭರದ ಕಡೆಗೆ ಸಾಗಿದೆ: ಸಂಸದ ಬಿವೈ ರಾಘವೇಂದ್ರ

ಶಿಕಾರಿಪುರ: ಕೇಂದ್ರ ಸಂವಹನ‌ ಇಲಾಖೆ ತಾಲೂಕ್ ಆಡಳಿತ  ತಾಲೂಕ್ ಪಂಚಾಯತ್ , ಪುರಸಭೆ ವಿವಿಧ ಇಲಾಖೆಯ ವತಿಯಿಂದ ಸಾಂಸ್ಕೃತಿಕ ಭವನದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಸಂಸದ ಬಿವೈ ರಾಘವೇಂದ್ರ ಉದ್ಘಾಟಿಸಿದರು.

ಸಂಸದ ಬಿವೈ ರಾಘವೇಂದ್ರ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ‌ ಅವರ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಸರ್ಕಾರದ 8 ಆಡಳಿತದಲ್ಲಿ ಭಾರತ ಸ್ವಾವಲಂಬನೆ ಬದಕು ಕಂಡುಕೊಳ್ಳುತ್ತಿದೆ ಆತ್ಮ ನಿರ್ಭರತೆಗೆ ಸಾಗಿದೆ ಎಂದರು.

ಕೇಂದ್ರ ಸರ್ಕಾರದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ‌ ಅನೇಕ ಕಾರ್ಯಕ್ರಮ ದೇಶದ ಪ್ರಧಾನಿ ಮಾಡಿದ್ದಾರೆ‌. ಬೀದಿ ವ್ಯಾಪಾರಿಗಳಿಗೆ  ಬಡ್ಡಿ ರಹಿತ ಸಾಲ, ಪಿಎಂ ಕಿಸನ್ ಸನ್ಮಾನ ಯೋಜನೆ ಮೂಲಕ‌ ಜಿಲ್ಲೆ 153771 ರೈತರಿಗೆ ಹಣ ಬಿಡುಗಡೆಯಾಗಿದೆ.

ಪ್ರಧಾನ ಮಂತ್ರಿ  ಅವಾಜ್ ಯೋಜನೆ, ಮಾತೃ ಸುರಕ್ಷ ಉಜ್ವಲ ಯೋಜನೆ, ಕೇಂದ್ರ ಸರ್ಕಾರ ವತಿಯಿಂದ ಅನೇಕ ಯೋಜನೆಗಳನ್ನು ನೀಡಿಲಾಗಿದ್ದು ಎಂದರು

ಈ‌ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಎಂಟು ವರ್ಷ ಸಾಧನೆ ಛಾಯಾಚಿತ್ರ ಪ್ರದರ್ಶನ ಸ್ವಾತಂತ್ರ್ಯೋವದ ಅಮೃತ ಮಹೋತ್ಸವ ಮತ್ತು ಗಾಂಧಿ ಜಯಂತಿ ಅಂಗವಾಗಿ ಖಾದಿ ಬಟ್ಟೆ ಪ್ರದರ್ಶನ ಮಾರಟ ಕೇಂದ್ರದ ಸರ್ಕಾರ ಆಯ್ದ ಯೋಜನೆಗಳ ಫಲಾನುಭವಿಗಳಿಗೆ ಯೋಜನೆಗಳನ್ನು ವಿತರಿಸಲಾಯಿತು.

ಈ‌ ಸಂದರ್ಭದಲ್ಲಿ ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಾಡಾಡಿ, ಕೇಂದ್ರ ಸಂವಹನ ಇಲಾಖೆ ಅಧಿಕಾರಿ ಅಕ್ಷತಾ ,ಎಂಐಡಿಬಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ, ಪುರಸಭೆ ಅಧ್ಯಕ್ಷೆ ರೇಖಾಬಾಯಿ,ಮುಖಂಡರಾದ ಚನ್ನವೀರಪ್ಪ, ತಹಶಿಲ್ದಾರ್ ಎಂಪಿ ಕವಿರಾಜ್,ಇಓ‌ ಪರಮೇಶ್ವರ್,ಡಿ ಹೆಚ್ ಓ ರಾಜೇಶ್ ಸುರಗಿಹಳ್ಳಿ, ಡಾ.ಬಿ ಡಿ ಭೂಕಾಂತ್ ,ಕೆ.ಹಾಲಪ್ಪ,ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!