ಶಿಕಾರಿಪುರ: ಕೇಂದ್ರ ಸರ್ಕಾರದ 8 ವರ್ಷದ ಆಡಳಿತ ಭಾರತ ಅತ್ಮನಿರ್ಭರದ ಕಡೆಗೆ ಸಾಗಿದೆ: ಸಂಸದ ಬಿವೈ ರಾಘವೇಂದ್ರ
![ಶಿಕಾರಿಪುರ: ಕೇಂದ್ರ ಸರ್ಕಾರದ 8 ವರ್ಷದ ಆಡಳಿತ ಭಾರತ ಅತ್ಮನಿರ್ಭರದ ಕಡೆಗೆ ಸಾಗಿದೆ: ಸಂಸದ ಬಿವೈ ರಾಘವೇಂದ್ರ](https://shikarinews.com/wp-content/uploads/2022/10/IMG-20221002-WA0013.jpg)
ಶಿಕಾರಿಪುರ: ಕೇಂದ್ರ ಸಂವಹನ ಇಲಾಖೆ ತಾಲೂಕ್ ಆಡಳಿತ ತಾಲೂಕ್ ಪಂಚಾಯತ್ , ಪುರಸಭೆ ವಿವಿಧ ಇಲಾಖೆಯ ವತಿಯಿಂದ ಸಾಂಸ್ಕೃತಿಕ ಭವನದಲ್ಲಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಸಂಸದ ಬಿವೈ ರಾಘವೇಂದ್ರ ಉದ್ಘಾಟಿಸಿದರು.
![](https://shikarinews.com/wp-content/uploads/2022/10/IMG-20221002-WA0006-1024x682.jpg)
ಸಂಸದ ಬಿವೈ ರಾಘವೇಂದ್ರ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಸರ್ಕಾರದ 8 ಆಡಳಿತದಲ್ಲಿ ಭಾರತ ಸ್ವಾವಲಂಬನೆ ಬದಕು ಕಂಡುಕೊಳ್ಳುತ್ತಿದೆ ಆತ್ಮ ನಿರ್ಭರತೆಗೆ ಸಾಗಿದೆ ಎಂದರು.
![](https://shikarinews.com/wp-content/uploads/2022/10/IMG-20221002-WA0021-1024x683.jpg)
ಕೇಂದ್ರ ಸರ್ಕಾರದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ದೇಶದ ಪ್ರಧಾನಿ ಮಾಡಿದ್ದಾರೆ. ಬೀದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ, ಪಿಎಂ ಕಿಸನ್ ಸನ್ಮಾನ ಯೋಜನೆ ಮೂಲಕ ಜಿಲ್ಲೆ 153771 ರೈತರಿಗೆ ಹಣ ಬಿಡುಗಡೆಯಾಗಿದೆ.
![](https://shikarinews.com/wp-content/uploads/2022/10/IMG-20221002-WA0018-1024x683.jpg)
ಪ್ರಧಾನ ಮಂತ್ರಿ ಅವಾಜ್ ಯೋಜನೆ, ಮಾತೃ ಸುರಕ್ಷ ಉಜ್ವಲ ಯೋಜನೆ, ಕೇಂದ್ರ ಸರ್ಕಾರ ವತಿಯಿಂದ ಅನೇಕ ಯೋಜನೆಗಳನ್ನು ನೀಡಿಲಾಗಿದ್ದು ಎಂದರು
![](https://shikarinews.com/wp-content/uploads/2022/10/IMG-20221002-WA0015-1024x682.jpg)
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಎಂಟು ವರ್ಷ ಸಾಧನೆ ಛಾಯಾಚಿತ್ರ ಪ್ರದರ್ಶನ ಸ್ವಾತಂತ್ರ್ಯೋವದ ಅಮೃತ ಮಹೋತ್ಸವ ಮತ್ತು ಗಾಂಧಿ ಜಯಂತಿ ಅಂಗವಾಗಿ ಖಾದಿ ಬಟ್ಟೆ ಪ್ರದರ್ಶನ ಮಾರಟ ಕೇಂದ್ರದ ಸರ್ಕಾರ ಆಯ್ದ ಯೋಜನೆಗಳ ಫಲಾನುಭವಿಗಳಿಗೆ ಯೋಜನೆಗಳನ್ನು ವಿತರಿಸಲಾಯಿತು.
![](https://shikarinews.com/wp-content/uploads/2022/10/IMG-20221002-WA0014-1024x682.jpg)
ಈ ಸಂದರ್ಭದಲ್ಲಿ ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಾಡಾಡಿ, ಕೇಂದ್ರ ಸಂವಹನ ಇಲಾಖೆ ಅಧಿಕಾರಿ ಅಕ್ಷತಾ ,ಎಂಐಡಿಬಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ, ಪುರಸಭೆ ಅಧ್ಯಕ್ಷೆ ರೇಖಾಬಾಯಿ,ಮುಖಂಡರಾದ ಚನ್ನವೀರಪ್ಪ, ತಹಶಿಲ್ದಾರ್ ಎಂಪಿ ಕವಿರಾಜ್,ಇಓ ಪರಮೇಶ್ವರ್,ಡಿ ಹೆಚ್ ಓ ರಾಜೇಶ್ ಸುರಗಿಹಳ್ಳಿ, ಡಾ.ಬಿ ಡಿ ಭೂಕಾಂತ್ ,ಕೆ.ಹಾಲಪ್ಪ,ಇದ್ದರು.
News by: Raghu Shikari-7411515737