ಶಿಕಾರಿಪುರ: ಭಾರತ ಜೋಡೋ ಯಾತ್ರೆ ಕುರಿತು ಕಾಂಗ್ರೆಸ್ ಪಕ್ಷದಿಂದ ಪೂರ್ವಭಾವಿ ಸಭೆ
![ಶಿಕಾರಿಪುರ: ಭಾರತ ಜೋಡೋ ಯಾತ್ರೆ ಕುರಿತು ಕಾಂಗ್ರೆಸ್ ಪಕ್ಷದಿಂದ ಪೂರ್ವಭಾವಿ ಸಭೆ](https://shikarinews.com/wp-content/uploads/2022/09/IMG-20220929-WA0049.jpg)
ಶಿಕಾರಿಪುರ: ಪಟ್ಟಣದ ಸುರಭಿ ಭವನದಲ್ಲಿ ತಾಲೂಕ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತ ಜುಡೋ ಯಾತ್ರೆಯ ಕುರಿತು ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
![](https://shikarinews.com/wp-content/uploads/2022/09/IMG-20220929-WA0047-1024x576.jpg)
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಕರ್ನಾಟಕದ ಕಾಂಗ್ರೆಸ್ ಉಸ್ತುವರಿ ಮಯೂರ್ ಜೈಕುಮಾರ್ ಮಾತನಾಡಿ ದೇಶದ ಭವಿಷ್ಯದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಭಾರತ್ ಜುಡೋ ಯಾತ್ರೆ ನಡೆಯುತ್ತಿದ್ದೆ
![](https://shikarinews.com/wp-content/uploads/2022/09/IMG-20220929-WA0046-1024x576.jpg)
ಬಿಜೆಪಿ ಸರ್ಕಾರದ ದುರಾಡಳಿತ ಆರ್ಥಿಕ ದುಸ್ಥಿತಿ ಬೆಲೆ ಏರಿಕೆ ದೇಶದ ಜನತೆಗೆ ಬದುಕುವುದೆ ಕಷ್ಟವಾಗಿದ್ದು ಇಡೀ ದೇಶವೇ ರಾಹುಲ್ ಗಾಂಧಿ ಅವರ ಈ ಯಾತ್ರೆಗೆ ಬೆಂಬಲ ನೀಡುತ್ತಿದ್ದಾರೆ.
![](https://shikarinews.com/wp-content/uploads/2022/09/IMG-20220928-WA0024-1024x768.jpg)
ಅ.12 ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮೂಲಕ ಪಾದಯಾತ್ರೆ ಸಾಗಲಿದ್ದು ಶಿಕಾರಿಪುರ ತಾಲೂಕಿನಲ್ಲಿ ಪ್ರತಿಬೂತ್ ಮಟ್ಟದಲ್ಲೂ ಕಾರ್ಯಕರ್ತರನ್ನು ಕರೆತರಬೇಕು ಎಂದರು.
![](https://shikarinews.com/wp-content/uploads/2022/09/IMG-20220928-WA0029-1024x576.jpg)
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ , ಜಿಲ್ಲಾಧ್ಯಕ್ಷರಾದ ಸುಂದರೇಶ್,ಮಾಜಿ ಎಂಎಲ್ ಸಿ ಶಾಂತವೀರಪ್ಪ ಗೌಡ್ರು, ನಗರದ ಮಹದೇವಪ್ಪ,ಕೌಲಿ ಗಂಗಧರ್,ಎಸ್ .ಪಿ ನಾಗರಾಜ ಗೌಡ್ರು, ಚಂದ್ರಪ್ಪ, ಶಿವಶಂಕರ್ ,ಉಳ್ಳಿ ದರ್ಶನ್,ಭಂಡಾರಿ ಮಾಲತೇಶ್,ಮಾರವಳ್ಳಿ ಉಮೇಶ್, ಅನೇಕ ಮುಖಂಡರು ಇದ್ದರು.
News By: Raghu Shikari-7411515737