ಮತೀಯ ಶಕ್ತಿಗಳನ್ನು ಬೇರು ಮಟ್ಟದಿಂದಲೇ ಕಿತ್ತೊಗೆಯಲು ಸರ್ಕಾರ ಪ್ರಯತ್ನ: ಸಂಸದ ರಾಘವೇಂದ್ರ..!
![ಮತೀಯ ಶಕ್ತಿಗಳನ್ನು ಬೇರು ಮಟ್ಟದಿಂದಲೇ ಕಿತ್ತೊಗೆಯಲು ಸರ್ಕಾರ ಪ್ರಯತ್ನ: ಸಂಸದ ರಾಘವೇಂದ್ರ..!](https://shikarinews.com/wp-content/uploads/2022/08/IMG-20220817-WA0013.jpg)
ಶಿವಮೊಗ್ಗ: ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವ ಮತೀಯ ಶಕ್ತಿಗಳ ಸಂಘಟನೆಗಳನ್ನು ಬ್ಯಾನ್ ಮಾಡುವುದಕ್ಕಿಂತಲೂ ಇದಕ್ಕೆ ಬೆಂಬಲವಾಗಿರುವ ಮೂಲ ಶಕ್ತಿಗಳನ್ನು ಬೇರು ಸಹಿತ ಕಿತ್ತು ಹಾಕಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರಯತ್ನಿಸುತ್ತಿವೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
![](https://shikarinews.com/wp-content/uploads/2022/08/fdhfdhkkkk--819x1024.jpg)
ಚೂರಿ ಇರಿತಕ್ಕೆ ಒಳಗಾದ ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವು ಗಲಭೆ ಆರೋಪಗಳನ್ನು ಹೊತ್ತಿರುವ ಮತೀಯ ಸಂಘಟನೆಗಳನ್ನು ಬ್ಯಾನ್ ಮಾಡಿದರೆ, ಮತ್ತೆ ಬೇರೆ ಬ್ಯಾನರ್ ಅಡಿಯಲ್ಲಿ ಮತ್ತೆ ತಲೆ ಎತ್ತುತ್ತವೆ.
![](https://shikarinews.com/wp-content/uploads/2022/08/zia÷i÷aoi--819x1024.jpg)
ಹೀಗಾಗಿ, ಇಂತಹವರಿಗೆ ಕುಮ್ಮಕ್ಕು ನೀಡುತ್ತಿರುವ ದುಷ್ಟ ಶಕ್ತಿಗಳನ್ನು ಬೇರು ಸಹಿತ ಕಿತ್ತು ಹಾಕುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.
ಅಮಾಯಕನ ಮೇಲಿನ ಇಂತಹ ಹಲ್ಲೆ ಖಂಡನೀಯವಾದುದು.
![](https://shikarinews.com/wp-content/uploads/2022/08/fgjghjgkghkjhl--819x1024.jpg)
ಇಂತಹ ಮತೀಯ ಮಾನಸಿಕತೆ ಬದಲಾಗಬೇಕಿದ್ದು, ಬಹಳ ದಿನಗಳಿಂದ ರಾಜಕೀಯ ಶಕ್ತಿಗಳ ಕುಮ್ಮಕ್ಕಿನಿಂದ ಇಂತಹ ಕೃತ್ಯಗಳು ನಡೆಯುತ್ತಿವೆ. ಹಂತ ಹಂತವಾಗಿ ಇಂತಹ ಕೃತ್ಯಗಳನ್ನು ನಿಯಂತ್ರಿಸುತ್ತಿದ್ದೇವೆ ಎಂದರು.
![](https://shikarinews.com/wp-content/uploads/2022/08/fainal-copy-1-1024x819.jpg)
ಮತೀಯ ಶಕ್ತಿಗಳ ಕೃತ್ಯದಿಂದ ಅಮಾಯಕರು ಹಾಗೂ ಎಲ್ಲ ಸ್ಥರದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ.
![](https://shikarinews.com/wp-content/uploads/2022/08/IMG_20220814_115051_543.jpg)
ಸಂಜೆ ಮೇಲಿನ ವ್ಯಾಪಾರಸ್ಥರು ಹಾಗೂ ಬೀದಿ ಬದಿ ವ್ಯಾಪಾರಿಗಳು ಎಲ್ಲ ಸಿದ್ದತೆ ಮಾಡಿಕೊಂಡಿರುತ್ತಾರೆ. ಹೀಗೆ ಯಾರದ್ದೋ ಸ್ವಾರ್ಥಕ್ಕೆ ಏಕಾಏಕಿ ಇಂತಹ ಕೃತ್ಯಗಳು ನಡೆದರೆ ಇಂತಹ ವ್ಯಾಪಾರಿಗಳ ಗತಿಯೇನು? ಅವರು ಎಷ್ಟು ನಷ್ಟ ಅನುಭವಿಸುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.
![](https://shikarinews.com/wp-content/uploads/2022/08/IMG_20220814_115055_725.jpg)
ಹಿಂದೆಲ್ಲಾ ಇಂತಹ ಕೃತ್ಯಗಳು ನಡೆದರೆ ತಿಂಗಳುಗಳಗಟ್ಟಲೇ ಆರೋಪಿಗಳನ್ನು ಬಂಧಿಸುತ್ತಿರಲಿಲ್ಲ. ಆದರೆ, ಈಗ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಲಾಗುತ್ತಿದೆ.
![](https://shikarinews.com/wp-content/uploads/2022/08/IMG-20220814-WA0018.jpg)
ಅಲ್ಲದೇ, ಹಿಂದೆಲ್ಲಾ ಕಾಟಾಚಾರಕ್ಕೆ ಬಂಧಿಸಿದ ನಂತರ ಬೇಲ್ ಮೇಲೆ ಹೊರಕ್ಕೆ ಬರುತ್ತಿದ್ದರು. ಆದರೆ, ಈಗ ಹಾಗೆ ಆಗದೇ ಬಿಗಿ ಮಾಡಲಾಗಿದೆ ಎಂದರು.
News By: Raghu Shikari-7411515737