ಕಾಳೆನಹಳ್ಳಿ ಗ್ರಾಮವನ್ನು ಪಾನಮುಕ್ತ ಮಾಡಲು ಕಾಳೆನಹಳ್ಳಿ ಶ್ರೀಗಳು ದೃಢ ಸಂಕಲ್ಪ..!
![ಕಾಳೆನಹಳ್ಳಿ ಗ್ರಾಮವನ್ನು ಪಾನಮುಕ್ತ ಮಾಡಲು ಕಾಳೆನಹಳ್ಳಿ ಶ್ರೀಗಳು ದೃಢ ಸಂಕಲ್ಪ..!](https://shikarinews.com/wp-content/uploads/2022/07/IMG_20220725_21010647.jpg)
ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಶಿವಯೋಗ ಮಂದಿರದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಕಾಳೇನಹಳ್ಳಿ ಶ್ರೀಗಳಾದ ಡಾ. ಸಿದ್ದಲಿಂಗ ಮಹಾಸ್ವಾಮಿಜಿಗಳು ಕಾಳೇನಹಳ್ಳಿ ಗ್ರಾಮವನ್ನು ಸಂಪೂರ್ಣ ಪಾನಮುಕ್ತ ಮಾಡುವ ದೃಢ ಸಂಕಲ್ಪವನ್ನು ಮಾಡಿದ್ದಾರೆ.
![](https://shikarinews.com/wp-content/uploads/2022/07/IMG_20220725_21005399-1024x576.jpg)
ಶಿಕಾರಿಪುರ ತಾಲೂಕಿನಲ್ಲಿ ಕಾಳೇನಹಳ್ಳಿ ಗ್ರಾಮವು ಅತ್ಯಂತ ಪವಿತ್ರ ಮತ್ತು ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದ್ದು ಈ ಕ್ಷೇತ್ರದಲ್ಲಿ ಲಿಂ. ಶ್ರೀ ರುದ್ರಮುನಿ ಮಹಾಸ್ವಾಮೀಜಿಗಳು ಲಿಂ. ಶ್ರೀ ರೇವಣಸಿದ್ದ ಮಹಾಸ್ವಾಮಿಜಿಗಳು ಹಾಗೂ ಅನೇಕ ತಪಸ್ವಿಗಳು ತಪೋಗೈದ ಪುಣ್ಯ ಭೂಮಿಯಾಗಿದೆ.
![](https://shikarinews.com/wp-content/uploads/2022/07/IMG_20220725_21010647.jpg)
ಈ ಕ್ಷೇತ್ರವನ್ನು ಪವಿತ್ರವಾಗಿಡುವ ಉದ್ದೇಶದಿಂದ ಊರಿನ ಗ್ರಾಮಸ್ಥರು ಹಿರಿಯರ ನಿರ್ಧಾರದಂತೆ ಶ್ರೀ ರುದ್ರಮುನಿ ಮಹಾಸ್ವಾಮೀಜಿಗಳ ಪುಣ್ಯಸ್ಮರಣೆ ಒಳಗೆ ಅಂದರೆ ಕಾಳೇನಹಳ್ಳಿ ಗ್ರಾಮವನ್ನು ಅಕ್ಟೋಬರ್ 9ರ ಒಳಗೆ ಸಂಪೂರ್ಣ ಪಾನಮುಕ್ತ ಗ್ರಾಮ ಎಂಬ ಸಂಕಲ್ಪವನ್ನು ಕೈಗೊಂಡಿದ್ದೇವೆ ಎಂದು ಶ್ರೀಗಳು ತಿಳಿಸಿದ್ದಾರೆ.
![](https://shikarinews.com/wp-content/uploads/2022/07/IMG_20220725_211925_612.jpg)
ಕಾಳೆನ ಹಳ್ಳಿಯ ಗ್ರಾಮದ ವ್ಯಾಪ್ತಿಯಲ್ಲಿ ಯಾರೂ ಕೂಡ ಮಧ್ಯಪಾನವನ್ನು ಮಾರಾಟ ಮಾಡುವಂತಿಲ್ಲ ಎಂಬ ದೃಢ ನಿರ್ಧಾರವನ್ನು ಗ್ರಾಮಸ್ಥರು ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಕಾಳೆನಹಳ್ಳಿಯ ಗ್ರಾಮದ ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಮುಖಂಡರು ಇದ್ದರು.
News by: Raghu Shikari-7411515737