ಕಾಳೆನಹಳ್ಳಿ ಗ್ರಾಮವನ್ನು ಪಾನಮುಕ್ತ ಮಾಡಲು ಕಾಳೆನಹಳ್ಳಿ ಶ್ರೀಗಳು ದೃಢ ಸಂಕಲ್ಪ..!

ಕಾಳೆನಹಳ್ಳಿ ಗ್ರಾಮವನ್ನು ಪಾನಮುಕ್ತ ಮಾಡಲು ಕಾಳೆನಹಳ್ಳಿ ಶ್ರೀಗಳು ದೃಢ ಸಂಕಲ್ಪ..!

ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಶಿವಯೋಗ ಮಂದಿರದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಕಾಳೇನಹಳ್ಳಿ ಶ್ರೀಗಳಾದ ಡಾ. ಸಿದ್ದಲಿಂಗ ಮಹಾಸ್ವಾಮಿಜಿಗಳು ಕಾಳೇನಹಳ್ಳಿ ಗ್ರಾಮವನ್ನು ಸಂಪೂರ್ಣ ಪಾನಮುಕ್ತ ಮಾಡುವ ದೃಢ ಸಂಕಲ್ಪವನ್ನು ಮಾಡಿದ್ದಾರೆ.

ಶಿಕಾರಿಪುರ ತಾಲೂಕಿನಲ್ಲಿ ಕಾಳೇನಹಳ್ಳಿ ಗ್ರಾಮವು ಅತ್ಯಂತ ಪವಿತ್ರ ಮತ್ತು ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದ್ದು ಈ ಕ್ಷೇತ್ರದಲ್ಲಿ ಲಿಂ. ಶ್ರೀ ರುದ್ರಮುನಿ ಮಹಾಸ್ವಾಮೀಜಿಗಳು ಲಿಂ. ಶ್ರೀ ರೇವಣಸಿದ್ದ‌ ಮಹಾಸ್ವಾಮಿಜಿಗಳು ಹಾಗೂ ಅನೇಕ ತಪಸ್ವಿಗಳು ತಪೋಗೈದ ಪುಣ್ಯ ಭೂಮಿಯಾಗಿದೆ.

ಈ ಕ್ಷೇತ್ರವನ್ನು ಪವಿತ್ರವಾಗಿಡುವ ಉದ್ದೇಶದಿಂದ ಊರಿನ ಗ್ರಾಮಸ್ಥರು ಹಿರಿಯರ ನಿರ್ಧಾರದಂತೆ ಶ್ರೀ ರುದ್ರಮುನಿ ಮಹಾಸ್ವಾಮೀಜಿಗಳ ಪುಣ್ಯಸ್ಮರಣೆ ಒಳಗೆ ಅಂದರೆ ಕಾಳೇನಹಳ್ಳಿ ಗ್ರಾಮವನ್ನು ಅಕ್ಟೋಬರ್ 9ರ ಒಳಗೆ ಸಂಪೂರ್ಣ ಪಾನಮುಕ್ತ ಗ್ರಾಮ ಎಂಬ ಸಂಕಲ್ಪವನ್ನು ಕೈಗೊಂಡಿದ್ದೇವೆ ಎಂದು ಶ್ರೀಗಳು ತಿಳಿಸಿದ್ದಾರೆ.

ಕಾಳೆನ ಹಳ್ಳಿಯ ಗ್ರಾಮದ ವ್ಯಾಪ್ತಿಯಲ್ಲಿ ಯಾರೂ ಕೂಡ ಮಧ್ಯಪಾನವನ್ನು ಮಾರಾಟ ಮಾಡುವಂತಿಲ್ಲ ಎಂಬ ದೃಢ ನಿರ್ಧಾರವನ್ನು ಗ್ರಾಮಸ್ಥರು ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಕಾಳೆನಹಳ್ಳಿಯ ಗ್ರಾಮದ ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಮುಖಂಡರು ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!