ಶಿಕಾರಿಪುರ: ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ಒದಗಿಸಿ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್
![ಶಿಕಾರಿಪುರ: ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ಒದಗಿಸಿ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್](https://shikarinews.com/wp-content/uploads/2022/07/FB_IMG_1658210328405.jpg)
ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಿಕಾರಿಪುರ ತಾಲೂಕಿನಲ್ಲಿ ಅತಿ ಹೆಚ್ಚಿನ ಮಳೆಯಿಂದಾಗಿ ಬೆಳೆ ಮನೆಗಳು ಕುಸಿದು ಬಿದ್ದಿವೆ ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣ ಪರಿಹಾರ ಕೊಡಿಸಬೇಕು ಎಂದು ತಾ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ್ ಅವರು ಒತ್ತಾಯಿಸಿದ್ದಾರೆ.
ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರವಾಗಿದೆ ಆಶ್ರಯ ಬಡಾವಣೆಯಲ್ಲಿ ಹೊಸ ರಸ್ತೆಗಳು ಕುಸಿದು ಬಿದ್ದಿದ್ದು ಅಲ್ಲಿ ಸಾರ್ವಜನಿಕರು ಓಡಾಡಲು ಆಗುತ್ತಿಲ್ಲ 40% ಕಮಿಷನ್ ರಸ್ತೆ ಎನ್ನುವುದಕ್ಕೆ ಉದಾಹರಣೆಗೆಯಾಗಿದೆ ಎಂದರು.
![](https://shikarinews.com/wp-content/uploads/2022/07/IMG-20220718-WA0028-1024x462.jpg)
ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುರಸಭಾ ಸದಸ್ಯರಾದ ಹುಲ್ಮಾರ್ ಮಹೇಶ್ ಮಾತನಾಡಿ ಶಿಕಾರಿಪುರ ಪುರಭೆಯಲ್ಲಿ ಅಧಿಕಾರ ಹಿಡಿಯಬೇಕೆಂದು ಬಿಜೆಪಿ ಹಣದ ಆಮಿಷವಡ್ಡಿ ಕೆಲ ಸದಸ್ಯರಿಗೆ ರಾಜೀನಾಮೆ ಕೊಡಿಸಿ ಮತ್ತೆ ಚುನಾವಣೆ ಮಾಡಿದ್ದು.
![](https://shikarinews.com/wp-content/uploads/2022/07/IMG-20220718-WA0018-1024x768.jpg)
ಅಧಿಕಾರ ಹಿಡಿದರು ಯಾವುದೇ ಪ್ರಯೋಜನವಾಗಿಲ್ಲ
ಪುರಪುರಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಇರುವ ಕಡೆ ಯಾವುದೇ ಅನುದಾನ ನೀಡಿರುವುದಿಲ್ಲ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಪುರಸಭೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ಎಷ್ಟು ಬಾರಿ ಮನವಿ ನೀಡಿದರೂ ಸಿಬ್ಬಂದಿಗಳ ಭರ್ತಿ ಮಾಡುತ್ತಿಲ್ಲ ಎಂದರು.
ಶಿಕಾರಿಪುರ ತಾಲೂಕಿನಲ್ಲಿ ಸಾಕಷ್ಟು ಮಳೆಯಿಂದಾಗಿ ಮೆಕ್ಕೆಜೋಳ ಹಾಳಾಗಿರುತ್ತದೆ ಕೂಡಲೇ ಸ್ಥಳ ಪರಿಶೀಲನೆ ಮಾಡಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಉಳ್ಳಿ ದರ್ಶನ್, ಭಂಡಾರಿ ಮಾಲತೇಶ್,ಸಂತೋಷ್, ನಗರದ ಮಾಲತೇಶ್,ಸುರೇಶ್ ಇದ್ದರು.
News By: Raghu Shikari-7411515737