ಶಿಕಾರಿಪುರ: ಬಿಜೆಪಿ ಯುವ ಮೋರ್ಚಾ ದಿಂದ ಬೈಕ್ ರ್ಯಾಲಿ: ಸಂಸದ ಬಿ.ವೈ ರಾಘವೇಂದ್ರ ಚಾಲನೆ
![ಶಿಕಾರಿಪುರ: ಬಿಜೆಪಿ ಯುವ ಮೋರ್ಚಾ ದಿಂದ ಬೈಕ್ ರ್ಯಾಲಿ: ಸಂಸದ ಬಿ.ವೈ ರಾಘವೇಂದ್ರ ಚಾಲನೆ](https://shikarinews.com/wp-content/uploads/2022/06/IMG-20220609-WA0023.jpg)
ಶಿಕಾರಿಪುರ : ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಯುವಮೋರ್ಚಾ ಶಿಕಾರಿಪುರ ವತಿಯಿಂದ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದಿಂದ ಚುರ್ಚಿಗುಂಡಿ ಸನ್ಯಾಸಿ ಕೊಪ್ಪದ ವರೆಗೆ ‘ವಿಕಾಸ ತೀರ್ಥ ಬೈಕ್ ರ್ಯಾಲಿ ಯನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಉದ್ಘಾಟಿಸಿದರು.
![](https://shikarinews.com/wp-content/uploads/2022/06/IMG-20220609-WA0024-1-1024x682.jpg)
ಶಿಕಾರಿಪುರ ಪಟ್ಟಣದಿಂದ ಚುರ್ಚುಗುಂಡಿಯ ಸನ್ಯಾಸಿಕೊಪ್ಪದ ವರೆಗೆ ಸಂಸದ ಬಿ.ವೈ ರಾಘವೇಂದ್ರ ಬೈಕ್ ಚಾಲನೆ ಮಾಡಿಕೊಂಡು ರ್ಯಾಲಿಯಲ್ಲಿ ಭಾಗವಹಿಸಿದರು.
![](https://shikarinews.com/wp-content/uploads/2022/06/IMG20220609120656-1024x576.jpg)
ಕೇಂದ್ರ ಬಿಜೆಪಿ ಸರ್ಕಾರ 8 ವರ್ಷ ಪೂರೈಸಿದ್ದು ಬಿಜೆಪಿ ವಿವಿಧ ಮೋರ್ಚಾದ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
![](https://shikarinews.com/wp-content/uploads/2022/06/IMG-20220609-WA0025-1024x682.jpg)
ಈ ಸಂದರ್ಭದಲ್ಲಿ ನಗರ ಯುವ ಮೋರ್ಚಾ ಅಧ್ಯಕ್ಷರಾದ ಬೆಣ್ಣೆ ಪ್ರವೀಣ್, ರಾಘವೇಂದ್ರ ಮಾಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಯ್, ರವಿಕಾಂತ್ ಪುಟ್ಟ,ರಾಜು,ಸೂರ್ಯ, ಸೀನಣ್ಣ, ದಾದು, ಪೃಥ್ವಿ ನಾಗರಾಜ್ ವಸಂತ್, ಶ್ರೀನಿವಾಸ್, ತೇಜು, ಹೇಮಂತ್. ಹಾಲೇಶ್. ಮನೋಜ್ ಮತ್ತಿತರು ಇದ್ದರು.
News By: Raghu Shikari-7411515737