ಶಿವಮೊಗ್ಗ:ಕೋವಿಡ್ ನಿಂದ ಮೃತಪಟ್ಟ‌ ಬಿಪಿಎಲ್‌ ಕುಟುಂಬಕ್ಕೆ 1ಲಕ್ಷ‌ ಪರಿಹಾರ ಘೋಷಿಸಿದ ಸಿಎಂಗೆ ಸಂಸದ ಬಿ. ವೈ.ರಾಘವೇಂದ್ರ ಅಭಿನಂದನೆ…!

ಶಿವಮೊಗ್ಗ:ಕೋವಿಡ್ ನಿಂದ ಮೃತಪಟ್ಟ‌ ಬಿಪಿಎಲ್‌ ಕುಟುಂಬಕ್ಕೆ 1ಲಕ್ಷ‌ ಪರಿಹಾರ ಘೋಷಿಸಿದ ಸಿಎಂಗೆ ಸಂಸದ ಬಿ. ವೈ.ರಾಘವೇಂದ್ರ ಅಭಿನಂದನೆ…!

ಶಿವಮೊಗ್ಗ: ಕರೋನಾದಿಂದ ಮರಣ ಸಂಭವಿಸಿದ ಬಿಪಿಎಲ್ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಂದು ಲಕ್ಷ ರೂ. ಪರಿಹಾರ ಘೋಷಿಸಿರುವುದಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಭಿನಂದಿಸಿದ್ದಾರೆ.

ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದಲ್ಲಿ ಯಾರಾದರೂ ಕರೋನಾಗೆ ಬಲಿಯಾದರೆ, ಅಂತವರ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ಘೋಷಿಸಿರುವುದು ದೇಶದಲ್ಲೇ ಪ್ರಥಮವಾಗಿದೆ.

ಕೋವಿಡ್‍ನಿಂದ ಸಾಕಷ್ಟು ಕುಟುಂಬಗಳಲ್ಲಿ ದುಡಿಯುವ ವ್ಯಕ್ತಿಗಳೇ ಮೃತಪಟ್ಟಿದ್ದಾರೆ. ಅಂತಹ ಕುಟುಂಬಗಳಿಗೆ ಮುಖ್ಯಮಂತ್ರಿ ಅವರ ಪರಿಹಾರದಿಂದ ನೆರವಾಗಲಿದೆ.

ಇದರಿಂದ ರಾಜ್ಯದಲ್ಲಿ 25ರಿಂದ 30 ಸಾವಿರ ಕುಟುಂಬಗಳಿಗೆ ಅನುಕೂಲವಾಗಲಿದ್ದು, ಸರ್ಕಾರಕ್ಕೆ 250ರಿಂದ 300ಕೋಟಿ ರೂ. ವೆಚ್ಚವಾಗಲಿದೆ.

ಬಡವರ ಸಂಕಷ್ಟಕ್ಕೆ ಯಾವಾಗಲೂ ನೆರವಾಗುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರೋನಾದಿಂದ ಸಂಕಷ್ಟಕ್ಕೀಡಾದ ಬಡ ಕುಟುಂಬಗಳಿಗೆ ಮತ್ತೆ ನೆರವಿನ ಹಸ್ತ ಚಾಚಿದ್ದಾರೆ ಎಂದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!