ತೀರ್ಥಹಳ್ಳಿ:ಚಿಲ್ಲರೆ ದುಡ್ಡಿಗಾಗಿ ವೃದ್ದೆ ಕತ್ತು ಹಿಸುಕಿ ಕಳ್ಳತನ ಯತ್ನ ..!

ತೀರ್ಥಹಳ್ಳಿ:ಚಿಲ್ಲರೆ ದುಡ್ಡಿಗಾಗಿ ವೃದ್ದೆ ಕತ್ತು ಹಿಸುಕಿ ಕಳ್ಳತನ ಯತ್ನ ..!

ತೀರ್ಥಹಳ್ಳಿ: ಅಂಚೆ ಕಚೇರಿಯಿಂದ ಬರುತ್ತಿದ್ದ ವೇಳೆ ಮನೆಯ ಬಳಿ ಬೈಕಲ್ಲಿ ಬಂದ ಕಳ್ಳರಿಬ್ಬರು ಆಕೆಯ ಕತ್ತು ಹಿಸುಕಿ ಹಣ ಕಸಿದು ಪರಾರಿಯಾಗುವ ಯತ್ನ ನಡೆಸಿದ ಘಟನೆ ತೀರ್ಥಹಳ್ಳಿ ತಾಲೂಕು ಕಟ್ಟೆಹಕ್ಕಲು ಬಳಿ ಗಣಪತಿಕಟ್ಟೆ ಎಂಬಲ್ಲಿ ಬುಧವಾರ ನಡೆದಿದೆ.

ಘಟನೆಯಲ್ಲಿ ಅಜ್ಜಿ ಗಂಭೀರ ಗಾಯಗೊಂಡಿದ್ದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಕಟ್ಟೆಹಕ್ಲು ಗಣಪತಿ ದೇವಸ್ಥಾನದ ಎದುರು ವಾಸವಾಗಿರುವ ವೃದ್ಧೆ ಭವಾನಿಯಮ್ಮ(85) ಅಂಚೆ ಕಛೇರಿಗೆ ಹೋಗಿ ಬರುತ್ತಿದ್ದನ್ನು ಗಮನಿಸಿದ ಇಬ್ಬರು ಕಳ್ಳರು ಬೈಕ್ನಲ್ಲಿ ಇಬ್ಬರು ಅಡ್ಡಹಾಕಿ ಕುತ್ತಿಗೆ ಹಿಸುಕಿದ್ದಾರೆ.

ಈ ವೇಳೆ ಸ್ಥಳೀಯರು ನೋಡಿ ಕೂಗಿಕೊಂಡಾಗ ಓರ್ವ ಬೈಕಲ್ಲಿ ಪರಾರಿಯಾಗಿದ್ದಾನೆ.

ಇನ್ನೋರ್ವ ಓಡಿ ಹೋಗಿದ್ದು, ಹೆರಂಬಾಪುರ ಬಳಿ ಸ್ಥಳೀಯರು ಸೇರಿ ಚೇಸ್ ಮಾಡಿ ಹಿಡಿದಿದ್ದಾರೆ.

ಸಿಕ್ಕಿಬಿದ್ದ ಕಳ್ಳ ನಿತಿನ್ (36) ಶಿವಮೊಗ್ಗದ ಗೋಪಾಳದವನು. ಇನ್ನೊರ್ವ ಎಲ್ಲಿಯವನು ಎಂದು ತನಿಖೆ ನಡೆಯುತ್ತಿದೆ.

ಘಟನೆಯಿಂದ ಗಂಭೀರ ಗಾಯಗೊಂಡ ಭವಾನಿ ಅವರನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳಿಸಲಾಗಿದೆ.

ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ
ಈ ಕಳ್ಳರು ಕಟ್ಟಹಕ್ಕಲಿಗೆ ಮದ್ಯ ಸೇವಿಸಲು ಬಂದಿದ್ದರು ಎನ್ನಲಾಗಿದೆ.

ಈ‌ ಸಂಬಂಧ ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!