ಶಿಕಾರಿಪುರ:ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ನಿರ್ಲಕ್ಷ್ಯ : ಯುವ ಕಾಂಗ್ರೇಶ್ ಮುಖಂಡ ಮಂಜುನಾಥ ಆರೋಪ…!
![ಶಿಕಾರಿಪುರ:ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ನಿರ್ಲಕ್ಷ್ಯ : ಯುವ ಕಾಂಗ್ರೇಶ್ ಮುಖಂಡ ಮಂಜುನಾಥ ಆರೋಪ…!](https://shikarinews.com/wp-content/uploads/2021/05/IMG_20210514_210320_682.jpg)
ಶಿಕಾರಿಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ರೋಗಿಗಳ ದಾಖಲಾತಿಯಲ್ಲೂ ಆಕ್ರಮ ನಡೆಯುತ್ತಿದೆ ಎಂದು ಆರೋಪಿ ಕಾಂಗ್ರೆಸ್ ಯುವ ಮುಖಂಡರ ಹಳೇ ಕಣೀಯದ ಮಂಜುನಾಥ ಆರೋಪಿಸಿದ್ದಾರೆ.
ಕೋವಿಡ್ ಪಾಸಿಟಿವ್ ಬಂದವರಿಗೆ ದಾಖಲಾತಿ ಮಾಡಿಕೊಳ್ಳಲು ಬೆಡ್ ಇಲ್ಲ ಎನ್ನುತ್ತಾರೆ ಪ್ರಭಾವಿಗಳಿಂದ ದೂರವಾಣಿ ಕರೆ ಮಾಡಿದ್ದಾರೆ ಬೆಡ್ ನೀಡುತ್ತಾರೆ.
ಇನ್ನೂ ಸ್ವತಃ ನಮ್ಮ ತಂದೆಗೆ ಪಾಸಿಟಿವ್ ಬಂದಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು ಕೋವಿಡ್ ಕೇರ್ ಸೆಂಟರ್ ನಿಂದ ಅವರನ್ನು ರಾತ್ರಿ ವೇಳೆಗೆ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲ ಕರೆತಂದು ಆಸ್ಪತ್ರೆ ಬಾಗಿಲಿನಲ್ಲಿ ಬಿಟ್ಟು ಹೋಗಿದ್ದಾರೆ ರಾತ್ರಿ ಇಡೀ ಬೆಡ್ ಸಿಗದೇ ನಮ್ಮ ದೊಡ್ಡಮ್ಮ ಮತ್ತು ತಂದೆ ಹೊರಗಡೆಯೇ ಮಲಗಿದ್ದಾರೆ.
![](https://shikarinews.com/wp-content/uploads/2021/05/IMG-20210514-WA0069-768x1024.jpg)
ಇನ್ನೂ ಆಸ್ಪತ್ರೆಯ ಹೊರಗೆ ಸಾಕಷ್ಟು ರೋಗಿಗಳು ಬೆಡ್ ಸಿಗದೇ ಮಲಗಿರುವ ದೃಶ್ಯಗಳು ಕಂಡುಬಂದಿದ್ದು ರೋಗಿಗಳಿಗೆ ಊಟ, ನೀರು, ಯಾವುದು ಸರಿಯಾದ ರೀತಿಯಲ್ಲಿ ಸಿಗುತ್ತಿಲ್ಲ ಎಂದರು.
ಈ ಕುರಿತು ತಹಶಿಲ್ದಾರ, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇನೆ ಕೂಡಲೇ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದರು.
![](https://shikarinews.com/wp-content/uploads/2021/05/IMG_20210514_210325_839.jpg)
ನಮ್ಮ ಮನವಿ ಇಷ್ಟೆ ರೋಗಿಗಳು ಆಸ್ಪತ್ರೆಗೆ ಬಂದಾಗ ಅವರಿಗೆ ಮೊದಲು ಸೌಜನ್ಯದಿಂದ ಹಾಗೂ ಅವರ ಸಮಸ್ಯೆಯನ್ನು ಕೇಳಿ ಚಿಕಿತ್ಸೆ ನಂತರ ಮೊದಲು ರೋಗಿಗಳ ಉಪಚಾರ ಮಾಡಿ ಎಂದರು.
ಈ ಕುರಿತು ಸಾರ್ವಜನಿಕ ಆಸ್ಪತ್ರೆ ಡಾ. ಶಿವಾನಂದ ಮಾತನಾಡಿ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ ಹೆಚ್ವಿಗೆ ಪ್ರಮಾಣದಲ್ಲಿ ಇದ್ದು ಬೆಡ್ ಗಳ ಕೊರೆತೆ ಎದುರಾಗಿತ್ತು ಇಂದು ಹೊಸದಾಗಿ 10 ಬೆಡ್ ಗಳನ್ನು ಹಾಕಲಾಗಿದ್ದು ಈಗ ಯಾವುದೇ ಸಮಸ್ಯೆ ಇಲ್ಲ ಎಂದರು.
News by: Raghu Shikari-7411515737