ಶಿವಮೊಗ್ಗ:ಉಂಬಳೇಬೈಲು ಗ್ರಾಮದ ರೈತರು ಆನೆಗಳ ಕಾಟ ಮತ್ತೆ ರೈತರಲ್ಲಿ ಆತಂಕ..!
![ಶಿವಮೊಗ್ಗ:ಉಂಬಳೇಬೈಲು ಗ್ರಾಮದ ರೈತರು ಆನೆಗಳ ಕಾಟ ಮತ್ತೆ ರೈತರಲ್ಲಿ ಆತಂಕ..!](https://shikarinews.com/wp-content/uploads/2021/02/IMG-20210211-WA0030.jpg)
ಶಿವಮೊಗ್ಗ: ಉಂಬಳೇಬೈಲು ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕ್ಕರೆಬೈಲು ಆನೆ ಬಿಡಾರದ ಆನೆಗಳೊಂದಿಗೆ ಕಾಡಾನೆಗಳನ್ನು ಓಡಿಸಲು ಮೂರು ದಿನಗಳ ಕಾಲ ನಡೆಸಿದ ಕಾರ್ಯಾಚರಣೆ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿದೆ.
ನರಸಿಂಹರಾಜಪುರ ರಸ್ತೆಯಲ್ಲಿ ಕಾಕನಹಸೂಡಿ ವರಗೆ ಓಡಿಸಲಾಗಿದೆ ಮೂರು ಕಾಡಾನೆಗಳು ಕೇವಲ ನಾಲ್ಕೇ ದಿನದಲ್ಲಿ ವಾಪಸ್ ಬಂದಿದೆ.
![](https://shikarinews.com/wp-content/uploads/2021/02/IMG-20210211-WA0029.jpg)
ಕೈ ತೊಟ್ಟಳು ಗ್ರಾಮದ ಬಾಲಪ್ಪ ಎಂಬ ರೈತರ ಮನೆ ಪಕ್ಕದಲ್ಲಿರುವ ಅಡಿಕೆ ತೋಟಕ್ಕೆ ರಾತ್ರಿ ನುಗ್ಗಿದ ಆನೆಗಳು 25ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ತಿಂದು ಮುರಿದು ಹಾಕಿದ್ದಾವೆ.
ಊರಿನ ಗ್ರಾಮಸ್ಥರು ಗಳು ಜಿಲ್ಲಾಆಡಳಿ ಮತ್ತು ಅರಣ್ಯ ಅಧಿಕಾರಿಗಳಿಗೆ ಆನೆಗಳನ್ನು ಓಡಿಸುವ ಕಾರ್ಯ ಬೇಡ ಆನೆಗಳನ್ನು ಹಿಡಿದು ಸ್ಥಳಾಂತರ ಗೊಳಿಸಬೇಕೆಂದು ಆಗಮಿಸುತ್ತಿದ್ದಾರೆ.
News By: Raghu Shikari-7411515737