ಶಿಕಾರಿಪುರ: ಕುರುಬ ಸಮಾಜದ ಎಸ್ಟಿ ಮೀಸಲಾತಿ ಹೋರಾಟಕ್ಕೆ ತಾಲೂಕಿನಿಂದ ಐದು ಸಾವಿರಕ್ಕೂ ಹೆಚ್ಚು ಜನ ಹೊರಡುವ ನಿರೀಕ್ಷೆ: ಕಬಾಡಿ ರಾಜಣ್ಣ…!
![ಶಿಕಾರಿಪುರ: ಕುರುಬ ಸಮಾಜದ ಎಸ್ಟಿ ಮೀಸಲಾತಿ ಹೋರಾಟಕ್ಕೆ ತಾಲೂಕಿನಿಂದ ಐದು ಸಾವಿರಕ್ಕೂ ಹೆಚ್ಚು ಜನ ಹೊರಡುವ ನಿರೀಕ್ಷೆ: ಕಬಾಡಿ ರಾಜಣ್ಣ…!](https://shikarinews.com/wp-content/uploads/2021/02/🚩ಕಬಾಡಿ-ರಾಜಣ್ಣ-ಅಭಿಮಾನಿ-ಬಳಗ-20210206_130622.jpg)
ಶಿಕಾರಿಪುರ : ಬೆಂಗಳೂರಿನಲ್ಲಿ ನಡೆಯುತ್ತಿರುವ ಕುರುಬ ಸಮಾಜದ ಎಸ್ಟಿ ಮೀಸಲಾತಿ ಒತ್ತಾಯಿಸಿ ಬೃಹತ್ ಸಮಾವೇಶ ಫೆ.7 ರಂದು ನಡೆಯುತ್ತಿದ್ದು ತಾಲೂಕಿನಿಂದ ಐದು ಸಾವಿರಕ್ಕೂ ಹೆಚ್ಚು ಜನ ಹೊರಡುವ ನಿರೀಕ್ಷೆ ಇದೆ ಎಂದು ತಾಲೂಕ್ ಕುರುಬ ಸಮಾಜದ ಅಧ್ಯಕ್ಷ ಕಬಾಡಿ ರಾಜಣ್ಣ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಶಿಕಾರಿಪುರ ತಾಲೂಕಿನಿಂದ ಸುಮಾರು 40 ಕ್ಕೂ ಹೆಚ್ಚು ಬಸ್ ಗಳು ಹೊಡುತ್ತಿದ್ದು ಸಮಾಜದವರು ತಮ್ಮ ಬಳಗದ ವತಿಯಿಂದ ಸ್ವಯಂ ವಾಹನ ವ್ಯವಸ್ಥೆ ಮಾಡಿಕೊಂಡಿದ್ದಾರೆ.
ಸ್ವಯಂ ಪ್ರೇರಿತರಾಗಿ ಕುರುಬ ಸಮಾಜದ ಭಾಂದವರು ಹಳ್ಳಿ ಹಳ್ಳಿಗಳಿಂದ ಬಸ್ ಮತ್ತು ಸ್ವಂತವಾಹನಗಳನ್ನು ಮಾಡಿಕೊಂಡು ಹೊರಡುತ್ತಿದ್ದಾರೆ ಎಂದರು.
News By: Raghu Shikari-7411515737