ಶಿವಮೊಗ್ಗ : ಕೊರೋನಾ ವ್ಯಾಕ್ಸಿನೇಷನ್’ಗೆ ಚಾಲನೆ: ಮೊದಲ ಲಸಿಕೆ ನೀಡಿದ್ದು ಯಾರಿಗೆ..?

ಶಿವಮೊಗ್ಗ : ಕೊರೋನಾ ವ್ಯಾಕ್ಸಿನೇಷನ್’ಗೆ ಚಾಲನೆ: ಮೊದಲ ಲಸಿಕೆ ನೀಡಿದ್ದು ಯಾರಿಗೆ..?

ಶಿವಮೊಗ್ಗ: ಮಹಾಮಾರಿ ಕೊರೋನಾ ವಿರುದ್ಧ ಹೋರಾಟದ ಭಾಗವಾಗಿ ಜಿಲ್ಲಾ ಕೇಂದ್ರದಲ್ಲಿ ಕೊರೋನಾ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಿದರು.

ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರು ಅಭಿಯಾನಕ್ಕೆ ಚಾಲನೆ ನೀಡಿದ ನೇರಪ್ರಸಾರವನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ವೀಕ್ಷಿಸಿದ ನಂತರ ಸಚಿವರು ಕೊರೋನಾ ವ್ಯಾಕ್ಸಿನೇಷನ್’ಗೆ ಚಾಲನೆ ನೀಡಿದರು.

ಮೊದಲ ಲಸಿಕೆ ಯಾರಿಗೆ..?

ಇನ್ನು, ಜಿಲ್ಲೆಯಲ್ಲಿ ಮೊದಲ ಲಸಿಕೆಯನ್ನು ಕೊರೋನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸ್ಟಾಫ್ ನರ್ಸ್ ಗಾಯತ್ರಿ, ಎರಡನೆಯ ಲಸಿಕೆ ನಾನ್ ಕ್ಲಿನಿಕಲ್ ಸ್ಟಾಫ್ ವಿಕಾಸ್ ಹಾಗೂ ಮೂರನೆಯ ಲಸಿಕೆ ಆಸ್ಪತ್ರೆಯ ಮೆಡಿಕಲ್ ಸರ್ಜನ್ ಡಾ.ಶ್ರೀಧರ್ ಅವರುಗಳಿಗೆ ನೀಡಲಾಯಿತು.

ಆನಂತರ ಮೆಗ್ಗಾನ್ ಆಸ್ಪತ್ರೆಯ ಮೆಡಿಕಲ್ ಸರ್ಜನ್ ಡಾ.ಶ್ರೀಧರ್ ಅವರಿಗೆ ಲಸಿಕೆಯನ್ನು ಹಾಕಲಾಯಿತು.

ಶಿಕಾರಿಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ವ್ಯಾಕ್ಸಿನ್ ನೀಡಲಾಗುತ್ತಿದ್ದು ವ್ಯಾಕ್ಸಿನ್ ಮೊದಲ‌ ಹಂತದಲ್ಲಿ ವಾರಿಯರ್ಸ್‌ಗೆ ನೀಡಲಾಗುತ್ತದೆ ಗ್ರೂಪ್ ಡಿ ದೇವರಾಜ್ ಅವರಿಗೆ ನೀಡಲಾಯಿತು .

ಈ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್ ಸೇರಿದಂತೆ ಹಲವರು ಇದ್ದರು.

News by: Raghu shikari 7411515737

Admin

Leave a Reply

Your email address will not be published. Required fields are marked *

error: Content is protected !!