ಶಿವಮೊಗ್ಗ:ಎಳ್ಳಾಮಾವಾಸೆ ಜಾತ್ರೆಗೆ ಭಕ್ತರನ್ನು ಕೈ ಬೀಸಿ ಕರೆಯುತ್ತಿರುವ ರಾಮೇಶ್ವರ ಸನ್ನಿಧಿ…!

ಶಿವಮೊಗ್ಗ:ಎಳ್ಳಾಮಾವಾಸೆ ಜಾತ್ರೆಗೆ ಭಕ್ತರನ್ನು ಕೈ ಬೀಸಿ ಕರೆಯುತ್ತಿರುವ ರಾಮೇಶ್ವರ ಸನ್ನಿಧಿ…!

ಶಿವಮೊಗ್ಗ ; ತೀರ್ಥಹಳ್ಳಿ ಎಳ್ಳಾಮಾವಾಸ್ಯೆ ಜಾತ್ರೆಗೆ ಇಡೀ ತೀರ್ಥಹಳ್ಳಿ ರಂಗುಗೊಂಡಿದೆ. ತೀರ್ಥಹಳ್ಳಿಯ ಸೌಂದರ್ಯ ಇಮ್ಮಡಿಗೊಂಡಿದೆ. ಪಟ್ಟಣದ ಪ್ರಮುಖ ರಸ್ತೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಇನ್ನು ತುಂಗಾ ಸೇತುವೆಗೆ ಸುಣ್ಣ ಬಣ್ಣದ ಅಲಂಕಾರದ ಜೊತೆಗೆ ವಿದ್ಯುತ್ ದೀಪದ ಅಲಂಕಾರ ಮಾಡಲಾಗುತ್ತಿದೆ.

ನದಿ ತೀರ ಸೇರಿದಂತೆ ದೇವಸ್ಥಾನದ ಸುತ್ತಮುತ್ತ ಮತ್ತು ದೇವಸ್ಥಾನ ವಿದ್ಯುತ್ ದೀಪದ ಬಣ್ಣದಲ್ಲಿ ಮಿಂದೆದ್ದಿದೆ ಇದು ನೋಡುಗರಿಗೂ ಸಂತಸ ಉಂಟು ಮಾಡಿದೆ.

ಒಟ್ಟಾರೆಯಾಗಿ ಶ್ರೀ ರಾಮೇಶ್ವರ ದೇವಸ್ಥಾನವು ಜಾತ್ರಾ ಪ್ರಯುಕ್ತ ತನ್ನ ನೋಟವನ್ನೇ ಬದಲಾಯಿಸಿಕೊಂಡಿದ್ದು, ಭಕ್ತರನ್ನು ತನ್ನೆಡೆಗೆ ಸೆಳೆಯುತ್ತಿದೆ.

ತೀರ್ಥ ಸ್ನಾನಕ್ಕೆ ಭಕ್ತರ ಸಾಲು ಸಾಲು:

ಇನ್ನೂ ನಿನ್ನೆ ಮುಂಜಾನೆಯಿಂದಲೇ ಸ್ನಾನಕ್ಕೆ ದೂರ ದೂರದಿಂದ ಬಂದ ಭಕ್ತರು ಆಗಮಿಸಿದರು ಸಮಿತಿಯ ಅಚ್ಚುಕಟ್ಟು ಆಯೋಜನೆ ಮಾಡಿದ್ದರು.

ರಾಮೇಶ್ವರ ದೇವರ ಎಳ್ಳಾಮಾವಾಸ್ಯೆ ಜಾತ್ರೆ ಆರಂಭಗೊಂಡಿದ್ದು, ತೀರ್ಥ ಸ್ನಾನಕ್ಕೆ ಮುಂಜಾನೆಯಿಂದಲೇ ಸಾವಿರಾರು ಭಕ್ತರು ಆಗಮಿಸಿದ್ದರು.

ಪುರಾಣ ಪ್ರಸಿದ್ಧ ರಾಮ ಕೊಂಡದ ಬಳಿ ಬೆಳಿಗ್ಗೆಯಿಂದಲೇ ಜನ ಪುಣ್ಯ ಸ್ನಾನ ಮಾಡಿದರು.

ಧಾರ್ಮಿಕ ಕಾರ್ಯಗಳಿ ಮಾತ್ರ ಅನುಮತಿ:

ತೀರ್ಥಹಳ್ಳಿ ತಾಲೂಕ್ ಆಡಳಿತ ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಅವಕಾಶ ನೀಡಿದ್ದು ಜಾತ್ರೆ ಅಂಗಡಿಗಳಿಗೆ ಸ್ಥಳ ಅವಕಾಶ ನೀಡಿಲ್ಲ.

ಇನ್ನೂ ಪ್ರತಿ ವರ್ಷದಂತೆ ಜಾತ್ರೆಯ ಅದ್ಧೂರಿ ಇಲ್ಲದೇ ಇದ್ದರು ಜನರು ಸಂಖ್ಯೆಯಲ್ಲಿ ಕಡಿಮೆ ಕಂಡಿಲ್ಲ.

ಅಂಗಡಿ ಜಾತ್ರೆಯ ವ್ಯಾಪಾರಿಗಳು ರಸ್ತೆ ಸುತ್ತಮುತ್ತಲಿನಲ್ಲಿ ಮಳಿಗೆಗಳನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ.

News By: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!