ಶಿವಮೊಗ್ಗ: ತೀರ್ಥಹಳ್ಳಿಯ ಬಳಿ ಕಂಟೈನರ್ ವಾಹನ ಪಲ್ಟಿ 10ಕ್ಕೂ ಹೆಚ್ಚು ಹಸು ಸಾವು…!

ಶಿವಮೊಗ್ಗ: ತೀರ್ಥಹಳ್ಳಿಯ ಬಳಿ ಕಂಟೈನರ್ ವಾಹನ ಪಲ್ಟಿ 10ಕ್ಕೂ ಹೆಚ್ಚು ಹಸು ಸಾವು…!

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಬೆಜ್ಜವಳ್ಳಿಯ ಗ್ರಾಮದ ಬಳಿ ಐಶರ್ ಕಂಟೈನರ್ ವಾಹನ ಪಲ್ಟಿ ಹೊಡೆದಿದ್ದು ವಾಹನದಲ್ಲಿದ 16 ಹಸುಗಳಲ್ಲಿ 10 ಹಸುಗಳು ಸಾವನ್ನಪ್ಪಿದ ದುರ್ಘಟನೆ ಇಂದು ಮುಂಜಾನೆ ನಡೆದಿದೆ.

ವಾಹನದಲ್ಲಿದ್ದ ಮೂವರಲ್ಲಿ ಇಬ್ಬರು ಪರಾರಿಯಾಗಿದ್ದು ಚಾಲಕನನ್ನ ತೀರ್ಥಹಳ್ಳಿ ಜೆ.ಸಿ.ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರಿಗೆ ತೆರಳುತ್ತಿದ್ದ ಐಶರ್ ವಾಹನ ಸಂಖ್ಯೆ ಕೆಎ 17- ಬಿ 6471 ವಾಹನ ಬೆಜ್ಜವಳ್ಳಿಯ ದಾನ ಶಾಲೆಯ ಬಳಿ ಪಲ್ಟಿ ಹೊಡೆದಿದೆ.

ಅತಿಯಾದ ವೇಗ ಹಾಗೂ ಇಬ್ಬನಿಯ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ ಹೊಡೆದಿದೆ ಎನ್ನಲಾಗಿದೆ.

ಸಮಾರ್ಥ್ಯಕ್ಕಿಂತ ಹೆಚ್ಚಿನ ಹಸುಗಳನ್ನು ವಾಹನದಲ್ಲಿ ತುಂಬಿದ್ದಾರೆ ಹಾಗೂ ಅತೀ ವೇಗವಾಗಿ ವಾಹನ ಚಾಲನೆ ಮಾಡಿ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿರಬಹುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅಧಿಕಾರಿಗಳು ತುರ್ತು ಕಾರ್ಯಚರಣೆ ನಡೆಸಿ 6 ಹಸುಗಳನ್ನು ರಕ್ಷಣೆ ಮಾಡಿದ್ದಾರೆ‌.

ಅಪಘಾತ ಸ್ಥಳಕ್ಕೆ ಸಾರ್ವಜನಿಕ ಆಗಮಿಸಿದ್ದು ಜನರನ್ನು ನೊಡುತ್ತಿದಂತೆ ಗಾಯಗೊಂಡ ಚಾಲಕನನ್ನು ಹೊರತುಪಡಿಸಿ ಇಬ್ಬರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಇದು ಅಕ್ರಮ ಗೋಸಾಗಾಣಿಕೆ ಇರಬಹುದಾ ಎಂಬ ಪ್ರಶ್ನೆಗಳು ಮೂಡಿದ್ದು ಗಾಯಗೊಂಡ ಚಾಲಕ ಇದನ್ನು ನಿರಾಕರಿಸಿದಾನೆ ಎನ್ನಲಾಗಿದೆ.

ಈ ಕುರಿತು ಹೆಚ್ಚಿನ ತನಿಖೆ ನಡೆಯಬೇಕಾಗಿದ್ದು ಈ ಘಟನೆಯ ಕುರಿತು ತನಿಖೆ ನಂತರ ಸತ್ಯ ತಿಳಿದು ಬರಬೇಲಿದೆ‌.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!