ಶಿವಮೊಗ್ಗ: ಗಾಂಧಿ ಜಯಂತಿ ದಿನ ಯುವಾ ಬ್ರಿಗೇಡ್ ಕಾರ್ಯಕರ್ತರ ಸತ್ಯಾಗ್ರಹ..!
![ಶಿವಮೊಗ್ಗ: ಗಾಂಧಿ ಜಯಂತಿ ದಿನ ಯುವಾ ಬ್ರಿಗೇಡ್ ಕಾರ್ಯಕರ್ತರ ಸತ್ಯಾಗ್ರಹ..!](https://shikarinews.com/wp-content/uploads/2020/10/IMG-20201002-WA0027.jpg)
ಶಿವಮೊಗ್ಗ: ಶಿವಮೊಗ್ಗದ ಯುವಾ ಬ್ರಿಗೇಡ್ ಕಾರ್ಯಕರ್ತರು ಇಂದು ಖಾಸಗಿ ಬಸ್ ನಿಲ್ದಾಣದಲ್ಲಿ ಸತ್ಯಾಗ್ರಹ ಕುಳಿತಿದ್ದರು ಇವರು ಸತ್ಯಾಗ್ರಹ ಕುಳಿತಿದ್ದು ಯಾವುದೋ ಸರ್ಕಾರದ ವಿರುದ್ದ ಅಥವಾ ಯಾವುದೇ ಬೇಡಿಕೆ ಇಟ್ಟು ಮಾಡುತ್ತಿರುವುದಲ್ಲ.
ಮತ್ತೆ ಸತ್ಯಾಗ್ರಹ ಏಕೆ ಗೊತ್ತ:
ಗಾಂಧಿ ಜಯಂತಿ ಅಂಗವಾಗಿ ಯುವಾ ಬ್ರಿಗೇಡ್ ವತಿಯಿಂದ ಶಿವಮೊಗ್ಗದಲ್ಲಿ ಆತ್ಮನಿರೀಕ್ಷಣೆಗಾಗಿ ಇಡೀ ರಾಜ್ಯಾದ್ಯಂತ ಯುವಾ ಬ್ರಿಗೇಡ್ ವತಿಯಿಂದ ಸತ್ಯಾಗ್ರಹ ಆಯೋಜಿಸಲಾಗಿದೆ.
![](https://shikarinews.com/wp-content/uploads/2020/10/IMG-20201002-WA0028-1024x576.jpg)
ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ಸತ್ಯಾಗ್ರಹ ಮಾಡುತ್ತಿದ್ದಾರೆ ಎಲ್ಲಾ ಕಾರ್ಯಕರ್ತರು ಖಾದಿ ಬಟ್ಟೆ ಧರಿಸಿ ಸಮವಸ್ತ್ರ ತಲೆ ಮೆಲೆ ಖಾದಿಟೋಪಿ ಹಾಕಿಕೊಂಡು ಗಾಂಧಿಜೀ ಅವರ ಸ್ವಾಭಿಮಾನ ಭಾರತ ಖಾಗಿ ಗ್ರಾಮೋದ್ಯೋಗ ಕಲ್ಪನೆ ಸ್ವದೇಶಿ ಚಿಂತನೆಗೆ ಯುವಾ ಪಿಳಿಗೆ ಮುಂದಾಬೇಕು ಎಂಬ ಸಂದೇಶ ಸಾರಿದ್ದಾರೆ.
ಇವತ್ತು ಸಂಜೆವರೆಗೂ ಸತ್ಯಾಗ್ರಹ ನಡೆಯಲಿದೆ ಗಾಂಧೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸತ್ಯಾಗ್ರಹ ಆರಂಭಿಸಲಾಯಿತು.
ಬಳಿಕ ಮಾತನಾಡಿದ ಅಂಕಣಕಾರ ಸುಂದರ್ ರಾಜ್ ಅವರು, ಗಾಂಧೀಜಿ ಅವರ ಧ್ಯೇಯಗಳು, ಭಾರತದ ಕುರಿತ ಕಲ್ಪನೆಗಳನ್ನು ವಿವರಿಸಿದರು.
ಸಂಜೆ 4 ಗಂಟೆವರೆಗೆ ಈ ಸತ್ಯಾಗ್ರಹ ನಡೆಯಲಿದೆ ಈ ವೇಳೆ ಆಹಾರ ಸೇವಿಸದೆ ಮಹಾತ್ಮ ಗಾಂಧೀಜಿ ಅವರ ವಿಚಾರಗಳ ಸ್ಮರಣೆ, ಭಜನೆ ನೆರವೇರಲಿದೆ.
News by: Raghu Shikari-7411515737