ಅರಿಯನ್ನೇ ಪರಿಹರಿಸುವ ಹರಿದ್ರಾ” ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-18..!
![ಅರಿಯನ್ನೇ ಪರಿಹರಿಸುವ ಹರಿದ್ರಾ” ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-18..!](https://shikarinews.com/wp-content/uploads/2020/08/images-66.jpeg)
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
✍️: ಇಂದಿನ ವಿಷಯ
ಕಷಾಯದಲ್ಲಿನ ಘಟಕ ದ್ರವ್ಯಗಳು ಭಾಗ-18
“ಅರಿಯನ್ನೇ ಪರಿಹರಿಸುವ ಹರಿದ್ರಾ”
(ಅರಿಷಿಣ) Curcuma longa
“ಅರಿಶಿಣದ”ಯ ಸಂಶೋಧನಾತ್ಮಕ ವಿವರಣೆಗಾಗಿ ಕೆಳಗಿನ ಲಿಂಕ್ ನ್ನು ಒತ್ತಿ:
https://www.ncbi.nlm.nih.gov/pmc/articles/PMC5466256/
“ಗೋಲ್ಡನ್ ಮಿಲ್ಕ್” (ಬಂಗಾರದ ಹಾಲು) ಸೇವಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು
![](https://shikarinews.com/wp-content/uploads/2020/08/images-67.jpeg)
ಚರಕಾಚಾರ್ಯರು ಗಿಡಮೂಲಿಕೆಗಳ ವರ್ಗೀಕರಣದಲ್ಲಿ “ಹರಿದ್ರಾ” ಕ್ಕೆ ವಿಶೇಷ ಮಾನ್ಯತೆ ಕೊಟ್ಟು ಈ ಕೆಳಗಿನ ಗುಂಪಿಗೆ ಸೇರಿಸಿದ್ದಾರೆ.
• ಕುಷ್ಠಘ್ನ ವರ್ಗ
(ಚರ್ಮರೋಗಹರ ಔಷಧಿ ದ್ರವ್ಯಗಳ ಗುಂಪು)
• ವಿಷಘ್ನ ವರ್ಗ
(ರಕ್ತದಲ್ಲಿನ ವಿಷ ತಗೆಯುವ ಔಷಧಿ ದ್ರವ್ಯಗಳ ಗುಂಪು)
• ಲೇಖನೀಯ ವರ್ಗ
(ಮೇದಸ್ ಅನ್ನು ಕರಗಿಸುವ ಔಷಧಿ ದ್ರವ್ಯಗಳ ಗುಂಪು)
![](https://shikarinews.com/wp-content/uploads/2020/08/images-60.jpeg)
“ನಿಶಾ, ರಜನಿ,ವರ್ಣ ವಿಲಾಸಿನಿ” ಎಂಬ ವಿಶೇಷ ಹೆಸರುಗಳಿಂದ ಕರೆಸಿಕೊಂಡಿರುವ ಹರಿದ್ರಾವನ್ನು ಜಗತ್ತಿನ ಬಲಾಢ್ಯ ರಾಷ್ಟ್ರಗಳು ತಮ್ಮ ಸ್ವತ್ತನ್ನಾಗಿಸಿಕೊಳ್ಳಲು ಅನೇಕ ಕೋನಗಳಿಂದ ಯತ್ನಿಸಿದರೂ, ಈ “ವರ್ಣವಿಲಾಸಿನಿಯು” ಭಾರತಾಂಬೆಯ ಕೆನ್ನೆಯಲ್ಲಿ ಶೋಭಿಸಲು ಈ ರಾಷ್ಟ್ರದಲ್ಲೇ ನೆಲೆಸಿದ್ದಾಳೆ🇮🇳
![](https://shikarinews.com/wp-content/uploads/2020/08/images-61.jpeg)
ತ್ವಚೆಯ 7 ಪದರುಗಳಲ್ಲಿ “ರೋಹಿಣಿ” ಎಂಬ ಕಾಂತಿ ತರುವ ತ್ವಚೆಯ ಪದರಿನ ಜೊತೆಗೆ ಸಹಜವಾಗಿ ಬೆರೆತು ತ್ವಚೆಗೆ ದೈವತ್ವತ ಕಳೆಯನ್ನು ತರುತ್ತದೆ. ಏಕೆಂದರೆ, ಇದು ವಿಷಘ್ನವೂ ಹೌದು,ಕುಷ್ಠಘ್ನವೂ ಹೌದು(ಚರ್ಮ ವಿಕಾರನಾಶಕ) ಹಾಗೆಯೇ ವರ್ಣ ಪ್ರಸಾದನ ಮಾಡುವ, ರಕ್ತವನ್ನು ಶುದ್ಧೀಕರಣಗೊಳಿಸುವ ಸಂಜೀವಿನಿಯೂ ಹೌದು.
![](https://shikarinews.com/wp-content/uploads/2020/08/images-63.jpeg)
ಯಾವ ಸೋಂಕು ಅಥವಾ ಅಲರ್ಜಿ ಚರ್ಮಕ್ಕೆ ಬಾಧೆಯನ್ನು ತರುತ್ತದೋ ಅದೇ ಸೋಂಕು ಅಥವಾ ಅಲರ್ಜಿಯು ಪುಪ್ಪುಸಗಳನ್ನು ಬಾಧಿಸುತ್ತದೆ ಎಂಬುದು ವೈಜ್ಞಾನಿಕ ಸತ್ಯ. ಹಾಗೆಂದೇ,ಚರ್ಮದ ಅಲರ್ಜಿ(Urticaria) ಮತ್ತು ಪುಪ್ಪುಸದ ಅಲರ್ಜಿ(Rhinitis and Bronchitis) ಎರಡಕ್ಕೂ ಒಂದೇ ಔಷಧಿಯನ್ನು ಕೊಡುತ್ತಾರೆ.
![](https://shikarinews.com/wp-content/uploads/2020/08/images-65.jpeg)
ಮೂಗು, ಗಂಟಲು, ಉಸಿರಿನಾಳ, ಪುಪ್ಪುಸದ ಸೋಂಕು ಆಳದಲ್ಲಿ ಸ್ಥಿತವಾಗಿದ್ದರೂ ತನ್ನ ರಕ್ತಶೋಧಕ ಗುಣದಿಂದ ಹೊರತಗೆಯುತ್ತದೆ.
ಸೋಂಕಿನ ಜೀವಾಣುವಿನ ಒಳಗೆ ಇರಬಹುದಾದ ತೇವಾಂಶ, ಪಿಚ್ಚಿಲ(ಅಂಟು)ತೆಯನ್ನು ಇಲ್ಲದಂತೆ ಮಾಡಿಬಿಡುವುದರಿಂದ ಆ ಜೀವಾಣುಗಳನ್ನೂ , ಅವುಗಳ ವಿಭಜನೆಯನ್ನೂ ಅಥವಾ ಸಂತತಿಯನ್ನು ಶೀಘ್ರವಾಗಿ ಮತ್ತು ಸಮೂಲವಾಗಿ ಕೊಂದುಹಾಕುತ್ತದೆ ಅಥವಾ ನಿಷ್ಕ್ರಿಯೆಗೊಳಿಸುತ್ತದೆ.
![](https://shikarinews.com/wp-content/uploads/2020/08/images-67-1.jpeg)
ಗಮನಿಸಿ:
ಮೂಗಿನಿಂದ ಅತಿಯಾಗಿ ನೀರು ಸೋರುತ್ತಿರುವ ಸಂದರ್ಭದಲ್ಲಿ ಶುದ್ಧ ಅರಿಷಿಣ ಪುಡಿಯನ್ನು ಕೆಂಡದ ಮೇಲೆ ಹಾಕಿ, ಬರುವ ಹೊಗೆಯನ್ನೋ ಅಥವಾ ಅರಿಶಿಣದ ಕೊಂಬಿನ ತುದಿಯನ್ನು ಸುಟ್ಟು, ಬರುವ ಹೊಗೆಯನ್ನೋ ಮೂಗಿನಿಂದ ಆಳವಾಗಿ ಒಂದೇ ಒಂದುಬಾರಿ ಎಳೆದುಕೊಳ್ಳುವುದರಿಂದ ಸುರಿಯುತ್ತಿರುವ ಅಷ್ಟೂ ನೀರು ಆ ಕ್ಷಣದಲ್ಲೇ ಇಲ್ಲವಾಗಿಬಿಡುತ್ತದೆ.
![](https://shikarinews.com/wp-content/uploads/2020/08/images-62.jpeg)
ಹಾಗಾಗಿ, ಇಂದಿನ ಸೋಂಕಿತ ಪರಿಸ್ಥಿತಿಯಲ್ಲಿ ಸೋಂಕಿನ ವಿರುದ್ಧ ಬ್ರಹ್ಮಾಸ್ತ್ರದಂತೆ ಛೇಧಿಸಿ ತೊಡೆದುಹಾಕುವ ಹರಿದ್ರಾವು ದಿವ್ಯಸಂರಕ್ಷಕವಾಗಿದೆ.
“ಅರಿಶಿಣ” ಗಿಡಮೂಲಿಕೆಯುಕ್ತ ರೋಗನಿರೋಧಕಶಕ್ತಿವರ್ಧಕ 36 ಔಷಧಿ ದ್ರವ್ಯಗಳನ್ನೊಳಗೊಂಡ ಕಷಾಯ ಚೂರ್ಣಕ್ಕಾಗಿ ಸಂಪರ್ಕಿಸಿ:
9148702645
9606616165
8105451356
ವಿಶ್ವಹೃದಯಾಶೀರ್ವಾದವಂ ಬಯಸಿ
![](https://shikarinews.com/wp-content/uploads/2020/07/IMG_20200716_080621_875-1.jpg)
–ಡಾ.ಮಲ್ಲಿಕಾರ್ಜುನ ಡಂಬಳ
ATHARVA Institute of Ayurveda Research
Shimoga | Davanagere | Bengaluru | Kangra(H.P)
News by: Raghu Shikari- 7411515737