ಮಥುರ, ಕಾಶಿಯಲ್ಲಿಯೂ ಮಂದಿರ ನಿರ್ಮಾಣವಾಗಬೇಕಿದೆ: ಸಚಿವ ಕೆ.ಎಸ್ ಈಶ್ವರಪ್ಪ..!
![ಮಥುರ, ಕಾಶಿಯಲ್ಲಿಯೂ ಮಂದಿರ ನಿರ್ಮಾಣವಾಗಬೇಕಿದೆ: ಸಚಿವ ಕೆ.ಎಸ್ ಈಶ್ವರಪ್ಪ..!](https://shikarinews.com/wp-content/uploads/2020/08/IMG-20200805-WA0040.jpg)
ಶಿವಮೊಗ್ಗ : ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಇಂದು ಚಾಲನೆ ಸಿಕ್ಕಿದೆ ಅದರೆ ನಮ್ಮ ಶ್ರಾದ್ಧ ಕೇಂದ್ರಗಳಾದ ಮಥುರ,ಕಾಶಿಯಲ್ಲಿಯೂ ಅಯೋಧ್ಯೆ ರೀತಿಯಲ್ಲಿ ವಿವಾದ ಇದೆ ಅಲ್ಲಿ ಹೊದಾಗ ತಿಳಿಯುತ್ತದೆ ನಾವು ಪರಕೀಯರ ತರ ಬದುಕುತ್ತಿದ್ದೇವೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಇಂದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಧರ್ಮ ಸಭೆಯಲ್ಲಿ ಈಶ್ವರಪ್ಪನವರು ಕಾಶಿ ವಿಶ್ವನಾಥ ದೇವಾಲಯ ಹಾಗೂ ಮಥುರಾ ಶ್ರೀಕೃಷ್ಣ ದೇವಾಲಯವನ್ನ ಕಟ್ಟುವ ಬಗ್ಗೆ ಮಾತನಾಡಿದರು.
ಅಯೋಧ್ಯೆಯ ರೀತಿಯಲ್ಲಿಯೇ, ಕಾಶಿ ಮತ್ತು ಮಥುರಾದಲ್ಲಿರುವ ಮಸೀದಿಗಳನ್ನು ಕೂಡ ತೆರವುಗೊಳ್ಳಿಸಬೇಕಿದೆ ಅಲ್ಲಿ ದೇವರ ದರ್ಶನಕ್ಕೆ ತೆರಳಿದರೆ, ನಾವು ಗುಲಾಮರಂತೆ ಭಾಸವಾಗುತ್ತದೆ.
ಅಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಅಲ್ಲಿರುವ ಮಸೀದಿಗಳು ನಮಗೆ ಗುಲಾಮರು ಎಂಬಂತೆ ಬಿಂಬಿಸುತ್ತವೆ ಎಂದರು.