ಹರಿಹರ :ಬಡತನದಲ್ಲಿ ಅರಳಿದ ಕಾವೇರಿ…!
![ಹರಿಹರ :ಬಡತನದಲ್ಲಿ ಅರಳಿದ ಕಾವೇರಿ…!](https://shikarinews.com/wp-content/uploads/2020/07/IMG_20200714_135958_487.jpg)
ಹರಿಹರ:-ಕರೋನಾ ಅಗ್ನಿ ಪರೀಕ್ಷೆಯ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಎದುರಿಸಿದ ವಿದ್ಯಾರ್ಥಿಗಳ ಭವಿಷ್ಯದ ಫಲಿತಾಂಶ ಇಂದು ಪ್ರಕಟಗೊಂಡಿದೆ .
ಹರಿಹರ ತಾಲೂಕಿನ ಬಿಳಸನೂರು ಗ್ರಾಮದ ಕಾವೇರಿ ಅತ್ಯಂತ ಬಡತನದಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ 558 ಅಂಕಗಳೊಂದಿಗೆ ಶೇಕಡಾ 93 ಪರ್ಸೆಂಟೇಜ್ ಯೊಂದಿಗೆ ಅದ್ವಿತೀಯ ಸಾಧನೆಯನ್ನು ಮಾಡಿ ಹೊರಹೊಮ್ಮಿದ್ದಾರೆ.
ವಿದ್ಯಾರ್ಥಿಗಳಿಗೆ ಗಣಿತ ಕಬ್ಬಿಣದ ಕಡಲೆ ,ಆದರೆ ಈ ವಿದ್ಯಾರ್ಥಿನಿಗೆ ಗಣಿತ ಅತ್ಯಂತ ಸುಲಭ ನೂರಕ್ಕೆ ನೂರು ಅಂಕಗಳು ಗಣಿತದಲ್ಲಿ ಪಡೆದಿದ್ದಾರೆ .
ಕಾವೇರಿ ಶೇಖಡ ತೊಂಬತ್ತು ಮೂರು ಅಂಕಗಳೊಂದಿಗೆ ಅದ್ವಿತೀಯ ಸಾಧನೆ ಮಾಡಿದ್ದಕ್ಕೆ ಕುಟುಂಬದ ಎಲ್ಲ ಅಧ್ಯಕ್ಷರು ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ.ಪ್ರಕಾಶ ಮಂದಾರ.