ಶಿವಮೊಗ್ಗದಲ್ಲಿ ಇಂದು ಕರೋನಕ್ಕೆ ಮತ್ತೊಂದು ಬಲಿ..!
![ಶಿವಮೊಗ್ಗದಲ್ಲಿ ಇಂದು ಕರೋನಕ್ಕೆ ಮತ್ತೊಂದು ಬಲಿ..!](https://shikarinews.com/wp-content/uploads/2020/06/371203-corona-covid-19.jpg)
ಶಿವಮೊಗ್ಗದಲ್ಲಿ ಕರೋನ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು ಇದರ ಜೋತೆಗೆ ಸಾವನ್ನಪ್ಪಿದವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದೆ.
ಇಂದು ಗಾಂಧೀಬಜಾರ್ ನ ಕಸ್ತೂರ ಬಾ ರಸ್ತೆಯ ನಿವಾಸಿ 62 ವಯಸ್ಸಿನ ವೃದ್ಧರೋವರು ಕೊರೋನದಿಂದ ಸಾವನ್ನಪ್ಪಿದ್ದಾರೆ.
ಎರಡು ದಿನಗಳ ಹಿಂದೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿತ್ತು ಕೊರೋನ ಪಾಸಿಟವ್ ಎಂದು ತಿಳಿದು ಬಂದ ಕಾರಣ ಮೆಗ್ಗಾನ್ ಗೆ ದಾಖಲಿಸಲಾಗಿತ್ತು.
ಸಕ್ಕರೆ ಕಾಯಿಲೆ ಶೀತ ಜ್ವರ ಹಾಗೂ ಇತರ ಸಮಸ್ಯೆಯಿಂದ ಬಳಲುತ್ತಿದ ಇವರು ಕರೋನ ಸೋಂಕಿಗೆ ತುತ್ತಾಗಿದ್ದರು ಇಂದು ಸಾವನ್ನಪ್ಪಿದ್ದಾರೆ.
ಇದರಿಂದ ಜಿಲ್ಲೆಯಲ್ಲಿ ಕರೋನ ವೈರಸ್ ನಿಂದ ಈವರೆಗೂ 8 ಜನ ಸಾವನ್ನಪ್ಪಿದ್ದಾರೆ.
.