ಶಿಕಾರಿಪುರ :ಸಿಡಿಲು ಬಡಿದು ರೈತ ಹಸು ಸಾವು ನೀರಿನಲ್ಲಿ ಮುಳುಗಿ ಯುವಕ ಸಾವು…!
![ಶಿಕಾರಿಪುರ :ಸಿಡಿಲು ಬಡಿದು ರೈತ ಹಸು ಸಾವು ನೀರಿನಲ್ಲಿ ಮುಳುಗಿ ಯುವಕ ಸಾವು…!](https://shikarinews.com/wp-content/uploads/2020/04/WhatsApp-Image-2020-04-07-at-19.58.26.jpeg)
ಶಿಕಾರಿಪುರ ತಾಲೂಕು ತಾಳಗುಂದ ಹೋಬಳಿಯ ಕಾಡತ್ನಳ್ಳಿ ಗ್ರಾಮದಲ್ಲಿ ಸಿಡಲ ಬಡಿತಕ್ಕೆ ರೈತ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.
ಕಾಡತ್ನಳ್ಳಿ ಗ್ರಾಮದ ಕೆರಿಯಪ್ಪ(55) ಸಿಡಿಲು ಬಡಿದು ಮೃತಪಟ್ಟ ರೈತನಾಗಿದ್ದು ಇಂದು ಸಂಜೆ ಜಮೀನಿನಲ್ಲಿ ಶುಂಠಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಈ ಸಂಬಂದಿಸಿದಂತೆ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಡಿಲು ಬಡಿದು ಹಸು ಸಾವು:
ಶಿಕಾರಿಪುರ ತಾಲ್ಲೂಕು ಹೊಸೂರು ಬಳಿಯ ಹೊಸೂರು ದಿಬ್ಬದ ತಾಂಡದ ನೀಲಿಬಾಯಿ ಹುಣಸೆ ಮರದ ಹತ್ತಿರ ಆಕಳನ್ನು ಕಟ್ಟಿಕೊಂಡು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಅಕಳು ಮೃತಪಟ್ಟಿರುತ್ತದೆ. ಸ್ಥಳಕ್ಕೆ ಕಂದಾಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಜಲು ಹೋಗಿ ಯುವಕ ಸಾವು:
ಶಿಕಾರಿಪುರ ತಾಲೂಕ್ ತಾಳಗುಂದ ಗ್ರಾಮದ ಗ್ರಾಮದ ದೊಡ್ಡ ಕೆರೆಯಲ್ಲಿ ಈಜಲು ಹೋಗಿದ್ದು ಅನಿಲ್ ಬಿನ್ ರಾಮಪ್ಪ 17 ವರ್ಷ ITI ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುತ್ತಾನೆ.
ಶಿರಾಳಕೊಪ್ಪ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.