ಶಿಕಾರಿಪುರ :ಸಿಡಿಲು ಬಡಿದು ರೈತ ಹಸು ಸಾವು ನೀರಿನಲ್ಲಿ ಮುಳುಗಿ ಯುವಕ ಸಾವು…!

ಶಿಕಾರಿಪುರ :ಸಿಡಿಲು ಬಡಿದು ರೈತ ಹಸು ಸಾವು ನೀರಿನಲ್ಲಿ ಮುಳುಗಿ ಯುವಕ ಸಾವು…!

ಶಿಕಾರಿಪುರ ತಾಲೂಕು ತಾಳಗುಂದ ಹೋಬಳಿಯ ಕಾಡತ್ನಳ್ಳಿ ಗ್ರಾಮದಲ್ಲಿ ಸಿಡಲ ಬಡಿತಕ್ಕೆ ರೈತ ಸಾವನ್ನಪ್ಪಿದ  ಘಟನೆ ಇಂದು ನಡೆದಿದೆ.

ಕಾಡತ್ನಳ್ಳಿ ಗ್ರಾಮದ ಕೆರಿಯಪ್ಪ(55) ಸಿಡಿಲು ಬಡಿದು ಮೃತಪಟ್ಟ ರೈತನಾಗಿದ್ದು  ಇಂದು ಸಂಜೆ ಜಮೀನಿನಲ್ಲಿ ಶುಂಠಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ಈ ಸಂಬಂದಿಸಿದಂತೆ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿಲು ಬಡಿದು ಹಸು ಸಾವು:

ಶಿಕಾರಿಪುರ ತಾಲ್ಲೂಕು ಹೊಸೂರು ಬಳಿಯ ಹೊಸೂರು ದಿಬ್ಬದ ತಾಂಡದ  ನೀಲಿಬಾಯಿ  ಹುಣಸೆ ಮರದ ಹತ್ತಿರ ಆಕಳನ್ನು ಕಟ್ಟಿಕೊಂಡು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಅಕಳು ಮೃತಪಟ್ಟಿರುತ್ತದೆ. ಸ್ಥಳಕ್ಕೆ ಕಂದಾಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈಜಲು ಹೋಗಿ ಯುವಕ‌ ಸಾವು:

ಶಿಕಾರಿಪುರ ತಾಲೂಕ್ ತಾಳಗುಂದ ಗ್ರಾಮದ ಗ್ರಾಮದ ದೊಡ್ಡ ಕೆರೆಯಲ್ಲಿ ಈಜಲು ಹೋಗಿದ್ದು ಅನಿಲ್ ಬಿನ್ ರಾಮಪ್ಪ 17 ವರ್ಷ ITI ವಿದ್ಯಾರ್ಥಿ  ನೀರಿನಲ್ಲಿ ಮುಳುಗಿ ಮೃತ ಪಟ್ಟಿರುತ್ತಾನೆ.

ಶಿರಾಳಕೊಪ್ಪ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Admin

Leave a Reply

Your email address will not be published. Required fields are marked *

error: Content is protected !!