ಶಿಕಾರಿಪುರ: ಸರ್ಕಾರಿ ಆದೇಶಕ್ಕೆ ಸೀಮಿತವಾದ ಶಾಲಾ ರಜೆ ಬಂದ್ ಇದ್ದರು ನಡೆಯಿತು ಸಂತೆ..!

ಶಿಕಾರಿಪುರ: ಸರ್ಕಾರಿ ಆದೇಶಕ್ಕೆ ಸೀಮಿತವಾದ ಶಾಲಾ ರಜೆ ಬಂದ್ ಇದ್ದರು ನಡೆಯಿತು ಸಂತೆ..!

ಶಿಕಾರಿಪುರ: ರಾಜ್ಯದ್ಯಂತ ಸಾರ್ವಜನಿಕರು ಒಟ್ಟಿಗೆ ಸೇರಿದಂತೆ ಕರೋನ ಸೋಂಕು ಹರಡದಂತೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನರು ಎಚ್ಚರ ವಹಿಸಲು ಶಾಲಾ ಕಾಲೇಜು ರಜೆ ಘೋಷಣೆ ಮಾಡಿದ್ದಾರೆ ಅದರಂತೆ ಬಹುತೇಕ ಸರ್ಕಾರಿ ಶಾಲೆಗಳು ಈಗಾಗಲೇ ಪರೀಕ್ಷೆ ಮುಗಿಸಿ ರಜೆಯನ್ನು ನೀಡಿದ್ದಾರೆ.

ಸರ್ಕಾರಿ ಆದೇಶ ಗಾಳಿಗೆ ತೂರಿದ ಖಾಸಗಿ ಶಾಲೆಗಳು:

ರಾಜ್ಯ ಸರ್ಕಾರ ಆದೇಶ ನೀಡಿದ ನಂತರ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಶಿಕ್ಷಣಾಧಿಕಾರಿಗಳು ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದಾರೆ ಅದರೆ ಶಿಕಾರಿಪುರದ ಬಹುತೇಕ ಖಾಸಗಿ ಶಾಲೆಗಳು ಇಂದು ತೆರೆದಿದ್ದು 1-5 ತರಗತಿಯ ವಿದ್ಯಾರ್ಥಿಗಳಿಗೂ ಶಾಲೆಗೆ ಹಾಜರಾಗುವಂತೆ ತಿಳಿಸಿದ್ದು ಅಧಿಕಾರಿಗಳ ಆದೇಶವನ್ನು ಖಾಸಗಿ ಶಾಲೆಯವರು ಗಾಳಿಗೆ ತೂರಿದ್ದಾರೆ.

ಸಂತೆ ರದ್ದು ಮಾಡಿದರೂ ನಡೆಯಿತು ಸಂತೆ:

ಮುಂಜಾಗ್ರತ ಕ್ರಮವಾಗಿ ಪಟ್ಟಣ ಪುರಸಭೆ ಜಿಲ್ಲಾಧಿಕಾರಿಗಳ ಆದೇಶದಂತೆ ಶನಿವಾರ ನಡೆಯುವ ವಾರದ ಸಂತೆಯನ್ನು ರದ್ದುಗೋಳಿಸುವಂತೆ ಆದೇಶವನ್ನು ನೀಡಿದ್ದು ರಾತ್ರಿ ಆಟೋದ ಮೂಲಕ ದ್ವನಿವರ್ಧಕದಲ್ಲಿ ಸಂತೆ ರದ್ದಗಿದೆ ಎಂದು ಸಾರ್ವಜನಿಕರಿಗೆ ತಿಳಿಸಿದ್ದರು ಅದರೆ ಅತೀ ಹೆಚ್ಚು ಗ್ರಾಮೀಣ ಭಾಗದ ವ್ಯಾಪಾರಿಗಳು ಹಾಗೂ ಗ್ರಾಮೀಣ ಭಾಗದ ರೈತರು ಸಂತೆಗೆ ಆಗಮಿಸಿದ್ದು ಸಂತೆ ಎಂದಿನಂತೆ ಜನ ಸಂದಣಿ ಇಲ್ಲದೇ ಇದ್ದರೂ ತಕ್ಕ ಮಟ್ಟಿಗೆ ಎಂದಿನಂತೆ ನಡೆಯಿತು.

ಕುರಿ ಪೇಟೆಯಲ್ಲಿ ಜನ ಸಾಗರ:

ಶಿಕಾರಿಪುರದಲ್ಲಿ ವಾರದ ಸಂತೆ ಅತ್ಯಂತ ಪ್ರಮುಖ ಸಂತೆಯಾಗಿದ್ದು ಪ್ರತಿವಾರವೂ ಕುರಿಗಳ ಖರೀದಿಗೆ ಅಕ್ಕಪಕ್ಕದ ಜಿಲ್ಲೆಯ ತಾಲೂಕುಗಳಿಂದ ವ್ಯಾಪಾರಿಗಳು ಆಗಮಿಸುತ್ತಾರೆ ಒಂದು ಕಡೆ ಕರೋನ ವೈರಸ್‌ನ ಪರಿಣಾಮದಿಂದ ಕೋಳಿಯನ್ನು ತಿನ್ನಲು ಜನರು ಹಿಂಜರಿಯುತ್ತಿದ್ದು ಕುರಿಗೆ ಬೇಡಿಕೆ ಹೆಚ್ಚಾಗಿದೆ ಈ ಶನಿವಾರವೂ ಕೂಡ ಕುರಿಯನ್ನು ಖರೀದಿಸಲು ಜನರು ಮುಗಿಬಿದಿದ್ದು ಕುರಿಗಳ ವ್ಯಾಪಾರಿ ಜೋರಾಗಿ ನಡೆಯಿತು.

ಇನ್ನೂ ತಾಲೂಕಿನಲ್ಲಿ ಜಾತ್ರೆಗಳು ತೇರು ಮಾರಿಹಬ್ಬ ಕೂಡ ಕೆಲವು ಗ್ರಾಮಗಳಲ್ಲಿ ಇದ್ದು ಜನರು ದಿನಸಿ ಖರೀದಿ ಹಾಗೂ ಇನ್ನಿತರ ದಿನ ಬಳಕೆಯ ವಸ್ತುಗಳನ್ನು ಖರೀದಿಸಿದ್ದು ಎಂದಿನಂತೆ ಜನರ ಸಂಚಾರ ಸಂದಣಿ ಜೋರಾಗಿಯೇ ಇತ್ತು.

News By: Raghu Shikari=7411515737

Admin

Leave a Reply

Your email address will not be published. Required fields are marked *

error: Content is protected !!