ಶಿವಮೊಗ್ಗ: ಕರೋನಾ ವೈರಸ್ ಭೀತಿ ಔಷಧ ಕೊಡುವುದನ್ನು ನಿಲ್ಲಿಸಿದ ನಾಟಿ ವೈದ್ಯ…!
![ಶಿವಮೊಗ್ಗ: ಕರೋನಾ ವೈರಸ್ ಭೀತಿ ಔಷಧ ಕೊಡುವುದನ್ನು ನಿಲ್ಲಿಸಿದ ನಾಟಿ ವೈದ್ಯ…!](https://shikarinews.com/wp-content/uploads/2020/03/Screenshot_2020-03-08-12-18-26.png)
ಶಿವಮೊಗ್ಗ :ನಾಟಿ ವೈದ್ಯ ಪದ್ಧತಿ ಮೂಲಕ ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ನರಸೀಪುರದ ನಾರಾಯಣ ಮೂರ್ತಿ ಅವರು ಕರೋನಾ ವೈರಸ್ ಭೀತಿಯ ಹಿನ್ನಲೆ ಔಷಧ ನೀಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.
ದೇಶದ ವಿವಿಧ ಭಾಗದಿಂದ ಔಷಧಕ್ಕಾಗಿ ವಾರದಲ್ಲಿ ಮೂರು ದಿನ ನರಸೀಪುರಕ್ಕೆ ಬರುತ್ತಿದ್ದ ಸಾವಿರಾರು ಜನರು ಆಗಮಿಸುತ್ತಾರೆ.
ಹತ್ತುಸಾವಿರಕ್ಕೂ ಹೆಚ್ಚುಜನ ಒಂದೆಡೆ ಸೇರುತ್ತಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಯಿಂದ ತಾತ್ಕಾಲಿಕವಾಗಿ ಔಷಧ ಕೊಡುವುದನ್ನು ನಿಲ್ಲಿಸುವಂತೆ ನಾರಾಯಣಮೂರ್ತಿ ಅವರಿಗೆ ಸೂಚನೆ ನೀಡಲಾಗಿದೆ
ನಾರಾಯಣ ಮೂರ್ತಿ ಅವರು ಔಷಧಕೊಡುವುದನ್ನು ನಿಲ್ಲಿಸಿದರೂ ಕೆಲ ಖಾಸಗಿ ವ್ಯಕ್ತಿಗಳು ನಾರಾಯಣಮೂರ್ತಿ ಹೆಸರಿನಲ್ಲಿ ನಕಲಿ ಔಷಧ ವಿತರಣೆ ಮಾಡುತ್ತಿದ್ದಾರೆ.