ಏತ‌ ನೀರಾವರಿ ಕಾಮಗಾರಿ‌ ಉದ್ಘಾಟನೆಯಾದರೂ ಕೆರೆಗಳಿಗೆ ನೀರು ಬಂದಿಲ್ಲ: ಗೋಕುಲ್ ರಾಜ್

ಏತ‌ ನೀರಾವರಿ ಕಾಮಗಾರಿ‌ ಉದ್ಘಾಟನೆಯಾದರೂ ಕೆರೆಗಳಿಗೆ ನೀರು ಬಂದಿಲ್ಲ: ಗೋಕುಲ್ ರಾಜ್

ಶಿಕಾರಿಪುರ: ತಾಲೂಕಿನಲ್ಲಿ‌ ಏತ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಉದ್ಘಾಟನೆ ಮಾಡಲಾಗಿದ್ದು ಅದರೆ ಕೆರೆಗಳಿಗೆ ಇನ್ನೂ ನೀರು ತುಂಬುವ ಕೆಲಸ ಆಗಿಲ್ಲ ಎಂದು ಕೃಷಿ ಭೂಮಿ ಉಳಿಸಿ ಯುವ ಘಟಕ ಸಂಚಾಲಕ ಗೋಕುಲ್ ರಾಜ್ ತಿಳಿಸಿದರು‌.

ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಅವರು ಯಡಿಯೂರಪ್ಪನವರು ಉದ್ಘಾಟನೆ ಮಾಡಿರು ಏತ‌ ನೀರಾವರಿ ಯೋಜನೆಯಿಂದ‌ ಕೆರೆಗಳಿಗೆ ನೀರು ಬಂದಿಲ್ಲನೀರಾವರಿಯನ್ನು ಇದನ್ನು ನಂಬಿಕೊಂಡು ರೈತರು ಕಾಯುತ್ತಿದ್ದಾರೆ ಅಂಜನಾಪುರ ಜಲಾಶಯಕ್ಕೆ ತುಂಗ ನದಿಯಿಂದ ನೀರು ತರುವ ಏತ ನೀರಾವರಿ ಯೋಜನೆಯಾಗಿದ್ದು ಅದರೂ ಡ್ಯಾಂ ಸಂಪೂರ್ಣ ಖಾಲಿಯಾಗಿದೆ.

ತುಂಗ ನದಿಯಿಂದ ಕುಮದ್ವತಿ ನದಿಗೆ ನೀರು ಈ ಬಾರಿ ಆದರೂ ಬರುತ್ತಾ ಎಂದು ಜನರು ಪ್ರಶ್ನಿಸಿದ್ದಾರೆ ಅದ್ದರಿಂದ ಕೂಡಲೇ ನೂತನ ಶಾಸಕರು ಈ ಬಗ್ಗೆ ಗಮನ‌ ನೀಡಬೇಕಾಗಿ ಮನವಿ ಮಾಡಿದರು.

ಅಂಜನಾಪುರ ಜಲಾಶಯದ ನಿರ್ವಹಣೆಯನ್ನು ಅಧಿಕಾರಿಗಳು‌ ಸರಿಯಾಗಿ ಮಾಡುತ್ತಿಲ್ಲ ಡ್ಯಾಂಗೆ ಕೋಳಿ‌ ಫಾರಂ ನಿಂದ ಕಸವನ್ನು ಬಿಸಾಡುತ್ತಾರೆ‌‌ ಅಧಿಕಾರಿಗಳು‌ ಸೂಕ್ತ ನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ನಗರದ ಮಾಲತೇಶ್, ಭೋಗಿ ಉದಯ್, ಪವನ್, ಈಶ್ವರ್, ನಿಶಾಂತ್, ಜೀವನ್,ಇದ್ದರು.

News by: Raghu Shikari-7411515737

Admin

Leave a Reply

Your email address will not be published. Required fields are marked *

error: Content is protected !!