ಕೊರೋನಾ 4ನೇ ಅಲೆ ಕಟ್ಟಿಹಾಕಲು ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ…..!!

ಕೊರೋನಾ 4ನೇ ಅಲೆ ಕಟ್ಟಿಹಾಕಲು ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ…..!!

ಬೆಳಗಾವಿ: ಕೊರೋನಾ ೪ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸೋಂಕು ಹರಡದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಸರ್ಕಾರ ಹಲವು ಕ್ರಮಗಳನ್ನು ಘೋಷಿಸಿದೆ.

ಈ ಕುರಿತಂತೆ ಮಾತನಾಡಿರುವ ಸಚಿವ ಅಶೋಕ್ ಹಾಗೂ ಆರೋಗ್ಯ ಸಚಿವ ಸುಧಾಕರ್, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕೊರೋನಾ ಸೋಂಕು ಮತ್ತೆ ಹರಡದಂತೆ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಇದನ್ನು ಪಾಲಿಸುವ ಮೂಲಕ ಸಹಕಾರ ನೀಡಬೇಕು ಎಂದು ಕೋರಿದರು.

ಸಾಂದರ್ಭಿಕ ಚಿತ್ರ

ಸರ್ಕಾರ ಕೈಗೊಂಡ ಕ್ರಮಗಳು ಇಂತಿವೆ:
•ಸೋಂಕಿನ ಲಕ್ಷಣ ಕಂಡು ಬಂದರೆ ಕೊರೋನಾ ಪರೀಕ್ಷೆ ಮಾಡಿಸಬೇಕು.
•ಮೂರು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು.
•ಶಾಲಾ-ಕಾಲೇಜುಗಳಲಿ ಮಾಸ್ಕ್ ಹಾಗೂ ಸ್ಯಾನಿಟೈಸ್ ಕಡ್ಡಾಯ
•ಚಿತ್ರಮಂದಿರ ಹಾಗೂ ಸಭಾಂಗಣಗಳಲ್ಲು ಮಾಸ್ಕ್ ಕಡ್ಡಾಯ
•ಯಾವುದೇ ರೀತಿಯ ರ್‍ಯಾಲಿ, ಬಹಿರಂಗ ಸಭೆಗೆ ನಿರ್ಬಂಧವಿಲ್ಲ
•ಹೊಸ ವರ್ಷಾಚರಣೆ ಪಾರ್ಟಿ ರಾತ್ರಿ 1 ಗಂಟೆಯೊಳಗೆ ಮುಕ್ತಾಯವಾಗಬೇಕು.
•ಎಲ್ಲಾ ರೆಸ್ಟೋರೆಂಟ್, ಬಾರ್‌ಗಳಿಗೆ ೧ ಗಂಟೆಯವರೆಗೆ ಡೆಡ್‌ಲೈನ್
•ಪಾರ್ಟಿಗಳಲ್ಲಿ ಹಾಗೂ ಮಕ್ಕಳು ಭಾಗವಹಿಸುವಂತಿಲ್ಲ.
•ಹೊಟೇಲ್, ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಕೆಲಸ ಮಾಡುವವರಿಗೆ ಬೂಸ್ಟರ್ ಡೋಸ್ ಕಡ್ಡಾಯ ಎಂದು ಮಾರ್ಗ ಸೂಚಿ ಹೊರಡಿಸಿದೆ.

News By Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!