ಅಕ್ಷರದವ್ವ ಸಾವಿತ್ರಿಭಾಯಿ ಪುಲೆ ನಾಟಕ ಪ್ರದರ್ಶನ….!!!
ಶಿಕಾರಿಪುರ: ಎಲ್ಲರಿಗೂ ಶಿಕ್ಷಣ ಮರೀಚಿಕೆ ಎನ್ನುವ ಕಾಲಗಟ್ಟದಲ್ಲಿ ಶಿಕ್ಷಣ ನೀಡುವುದಕ್ಕಾಗಿ ತನ್ನ ಬದುಕನ್ನೆ ಸಮರ್ಪಿಸಿಕೊಂಡ ಹೆಮ್ಮೆಯ ಶಿಕ್ಷಕಿ ಸಾವಿತ್ರಿಬಾಯಿ ಪುಲೆ ಜೀವನ ಚರಿತ್ರೆ ಆಧರಿಸಿದ ‘ಅಕ್ಷರದವ್ವ’ ಸಾವಿತ್ರಿಭಾಯಿ ಪುಲೆ ನಾಟಕ ಉಚಿತ ಪ್ರದರ್ಶನ ಇದೇ ತಿಂಗಳ 13 ಮಂಗಳವಾರ ಸಂಜೆ 6ಕ್ಕೆ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ಗುಡಿ ಕೇಂದ್ರದ ಇಕ್ಬಾಲ್ ಅಹ್ಮದ್ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿ ಅವರು ಏಕವ್ಯಕ್ತಿ ರಂಗ ಪ್ರಸ್ತುತಿ ನಾಟಕ ಇದಾಗಿದ್ದು ಶೈಲಜಾ ಪ್ರಕಾಶ್ ಅಭಿನಯಿಸಲಿದ್ದಾರೆ.
ಹೆಗ್ಗೋಡು ನಾಡ ಚಾವಡಿ, ಕೆ.ವಿ.ಸುಬ್ಬಣ್ಣ ರಂಗ ಸಮೂಹ ವತಿಯಿಂದ ರಾಜ್ಯದ ಎಲ್ಲೆಡೆ ಈ ನಾಟಕ ಪ್ರದರ್ಶನಗೊಳ್ಳುತ್ತಿದ್ದು ಅದರ ನಿಮಿತ್ತ ಶಿಕಾರಿಪುರದಲ್ಲಿ ಪ್ರದರ್ಶನ ನಡೆಯಲಿದೆ ಎಂದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಜನಪದ ಪರಿಷತ್ತು, ಗುಡಿ ಸಾಂಸ್ಕೃತಿಕ ಕೇಂದ್ರ, ಸ್ನೇಹರಂಗ, ನಿತ್ಯೋತ್ಸವ ಸೇವಾ ಟ್ರಸ್ಟ್, ಟಿ.ಗ್ರೋತ್ ಸೇವಾಸಂಸ್ಥೆ, ಸುವ್ವಿ ಪ್ರಕಾಶನ ನಾಟಕ ಪ್ರದರ್ಶನಕ್ಕೆ ಸಹಯೋಗ ನೀಡಿವೆ. ಉಚಿತ ಪ್ರದರ್ಶನಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಸ್ನೇಹರಂಗ ಅಧ್ಯಕ್ಷ ಎಚ್.ಎಸ್.ಮಂಜುನಾಥ್, ನಿತ್ಯೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಜಗದೀಶ್ ಚುರ್ಚಿಗುಂಡಿ, ಪರಮೇಶ್ ಇದ್ದರು.
News by Raghu shikari-7411515737