“ಮುಸ್ಲಿಂ ಸಮಾಜದ ಹಿರಿಯರೇ ದೇಶ ವಿರೋಧಿ ಚಿಂತನೆಯನ್ನು ಸರಿ ಮಾಡಬೇಕು : ಬಿವೈ ರಾಘವೇಂದ್ರ

“ಮುಸ್ಲಿಂ ಸಮಾಜದ ಹಿರಿಯರೇ ದೇಶ ವಿರೋಧಿ ಚಿಂತನೆಯನ್ನು ಸರಿ ಮಾಡಬೇಕು : ಬಿವೈ ರಾಘವೇಂದ್ರ

ಶಿಕಾರಿಪುರದ ಶಿರಾಳಕೊಪ್ಪದ ಸಂಚಲನ ಮೂಡಿಸಿದ ನಿರ್ಭಂಧಿತ ಸಂಘಟನೆಗಳ ಕುರಿತಾಗಿ ಗೋಡೆ ಬರಹ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಬಿ.ವೈ.ರಾಘವೇಂದ್ರ , ಪಿಎಫ್‌ಐ , ಸಿಎಫ್‌ಐ ನಿಷೇಧದ ನಂತರ ಅದನ್ನು ಪ್ರಶ್ನೆ ಮಾಡಿ ಕೆಲವರು ಕೋರ್ಟ್‌ಗೆ ಹೋಗಿದ್ದರು .

ಕೋರ್ಟ್ ಕೂಡಾ ಸರ್ಕಾರದ ಕ್ರಮವನ್ನು ಸ್ವಾಗತಿಸಿದೆ . ಈ ದೇಶದಲ್ಲಿದ್ದು ದೇಶ ವಿರೋಧಿ ಚಟುವಟಿಕೆ ಮಾಡುತ್ತಿರುವ ಸಂಘಟನೆಗಳನ್ನು ನಾಶ ಮಾಡುವ ಮುಟ್ಟಿಸುವ ಸಂಕಲ್ಪ ಮಾಡಿದ್ದೇವೆ . ದೇಶ ವಿರೋಧಿ ಕೆಲಸಗಳು ಈಗಲೂ ಅಲ್ಲೊಂದು ಇಲ್ಲೊಂದು ನಡೆಯುತ್ತಿವೆ . ಇದಕ್ಕೆ ಉದಾಹರಣೆಯೇ ಶಿರಾಳಕೊಪ್ಪದ ಗೋಡೆ ಬರಹ .

ಶಿರಾಳಕೊಪ್ಪ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ . ಇಂತಹ ಸಂಘಟನೆಗೆ ಪ್ರೋತ್ಸಾಹ ಮಾಡಿದ್ದ ಪ್ರತಿಫಲವನ್ನು ನಾವೆಲ್ಲಾ ಅನುಭವಿಸುತ್ತಿದ್ದೇವೆ . ಮುಸ್ಲಿಂ ಸಮಾಜದ ಹಿರಿಯರೇ ದೇಶ ವಿರೋಧಿ ಚಿಂತನೆಯನ್ನು ಸರಿ ಮಾಡಬೇಕು . ಕಾನೂನು ಚೌಕಟ್ಟಿನಲ್ಲಿ ಮಾಡಬೇಕು . ಈ ಕುರಿತು ಸರ್ಕಾರ ಉಗ್ರವಾದ ಕ್ರಮ ಕೈಗೊಳ್ಳುತ್ತದೆ ಎಂದರು .

News by Raghu shikari-7411515737

Admin

Leave a Reply

Your email address will not be published. Required fields are marked *

error: Content is protected !!