ಸಿಗಂಧೂರು ಹಿನ್ನಿರಿಗೆ ಜಾರಿದ ಖಾಸಗಿ ಬಸ್ 40 ಪ್ರಯಾಣಿಕರು ಪ್ರಾಣಪಾಯದಿಂದ ಪಾರು..!
ಸಿಗಂದೂರು : ಶ್ರೀಕ್ಷೇತ್ರ ಸಿಗಂದೂರು ಮಾರ್ಗವಾಗಿ ಕಟ್ಟಿನಕಾರಿಗೆ ಹೊರಟಿದ್ದ ಖಾಸಗಿ ಬಸ್ವೊಂದು ನಿಯಂತ್ರಣ ತಪ್ಪಿ ಶರಾವತಿ ನದಿಗೆ ಬಿದ್ದು , ಪ್ರಯಾಣಿಕರಿಗೆ ಗಾಯಗಳಾಗಿವೆ . ಸಾಗರದಿಂದ ಕಟ್ಟಿನಕಾರಿಗೆ ಹೊರಟಿದ್ದ ಬಸ್ ಇದಾಗಿದ್ದು , ಹೊಳೆಬಾಗಿಲಿನಲ್ಲಿ ಲಾಂಚ್ಗೆ ಹತ್ತಿಸಲು ತೆಗೆದುಕೊಂಡು ನಿಲ್ಲಿಸಲು ಮುಂದಾಗಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಬಸ್ ಅನ್ನು ರಿವರ್ಸ್ ಮಾಡಿ ಲಾಂಚ್ಗೆ ಹತ್ತಿಸಲು ಸುಲಭವಾಗುವಂತೆ ನಿಲ್ಲಿಸಲು ಮುಂದಾದಾಗ ಈ ಘಟನೆ ನಡೆದಿದೆ . ಗಜಾನನ ಕಂಪನಿಗೆ ಸೇರಿದ ಬಸ್ ಇದಾಗಿದ್ದು , ಬಸ್ನಲ್ಲಿ ಸುಮಾರು 40 ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದೆ .
ಈ ಅವಘಡದಲ್ಲಿ ಕೆಲವರಿಗೆ ಗಾಯಗಳಾಗಿವೆ ಯಾವುದೇ ಸಾವು , ನೋವುಗಳು ಆಗಿಲ್ಲ . ಸಂಜೆ 6 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ .
ರಕ್ಷಣೆಗೆ ಬಸ್ ನೀರಿಗೆ ಇಳಿಯುತ್ತಿದ್ದಂತೆ ಗಾಭರಿಗೊಂಡು ಪ್ರಯಾಣಿಕರು ಕೂಗಿಕೊಂಡಿದ್ದಾರೆ . ಆದರೆ , ಅಷ್ಟರಲ್ಲಿ ನೀರು ಬಸ್ ಒಳಗೆ ಬರಲು ಪ್ರಾರಂಭಿಸಿದೆ . ಕೂಡಲೇ ಸ್ಥಳದಲ್ಲಿದ್ದ ಪ್ರವಾಸಿಗರು ಸೇರಿದಂತೆ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದು ಜೆಸಿಬಿ ವಾಹನದ ಮೂಲಕ ರಕ್ಷಣೆ ಮಾಡಿದ್ದಾರೆ.
News by Raghu shikari-7411515737