ಶಿಕಾರಿಪುರ: ಆಶ್ರಯ ಬಡಾವಣೆಯಲ್ಲಿ ದುರ್ಗಾದೇವಿ ದೇವಸ್ಥಾನ ಉದ್ಘಾಟನೆ

ಶಿಕಾರಿಪುರ: ಆಶ್ರಯ ಬಡಾವಣೆಯಲ್ಲಿ ದುರ್ಗಾದೇವಿ ದೇವಸ್ಥಾನ ಉದ್ಘಾಟನೆ

ಶಿಕಾರಿಪುರ ಪಟ್ಟಣದ ಕಾನೂರು ಆಶ್ರಯ ಬಡಾವಣೆಯಲ್ಲಿ ನವರಾತ್ರಿಯ ಪ್ರಯಕ್ತ ಶ್ರೀ ದುರ್ಗಾದೇವಿಯ ನೂತನ ದೇವಸ್ಥಾನವನ್ನು ಸಂಸದರಾದ ಬಿ. ವೈ ರಾಘವೇಂದ್ರ ಅವರು ಉದ್ಘಾಟಿಸಿದರು.

ಈ ವೇಳೆ ಮಾತನಾಡಿ ಅವರು ಆಶ್ರಯ ಬಡಾವಣೆಯಲ್ಲಿ ದುರ್ಗಾದೇವಿ ದೇವಸ್ಥಾನಕ್ಕೆ 30 ಲಕ್ಷ ಅನುದಾನ ನೀಡಿ ದೇವಸ್ಥಾನ ನಿರ್ಮಾಣ ಮಾಡಲಾಗಿದ್ದು ಭಕ್ತರಿಗೆ ಅನುಕುಲವಾಗಲಿದೆ.

ಈ ಬಡಾವಣೆಯಲ್ಲಿ ಪ್ರತಿ ಬೀದಿಗೂ ಉತ್ತಮ ರಸ್ತೆಯ ಅವಶ್ಯಕತೆ ಇದ್ದು ಯುಜಿಡಿ ಕಾಮಗಾರಿ ಪೂರ್ಣವಾದ ನಂತರ ಎಲ್ಲಾ ಕೇರಿಗಳಿಗೂ ಕಾಂಕ್ರೀಟ್ ರಸ್ತೆ ‌ನಿರ್ಮಾಣ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಎಂಐಡಿಬಿ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ, ಪುರಸಭೆ ಅಧ್ಯಕ್ಷೆ ರೇಖಾಬಾಯಿ, ಸದಸ್ಯರಾದ ಪಾಲಾಕ್ಷಪ್ಪ, ಉಮಾವತಿ, ರೂಪಕಲಾ,ಲಕ್ಷ್ಮಿ, ರೂಪ ,ಸುನಂದ,ಮುಖಂಡರಾದ ಮನೋಹರ್, ರಾಜು, ಹುಲಿಗೇಶ್,ಸಂತೋಷ್ ಗುಡ್ಡಳ್ಳಿ,ಪ್ರಶಾಂತ ಸಾಳಂಕೆ,ಪ್ರವೀಣ್,ಹಾಲೇಶ್, ನಾಗರಾಜ,‌ಕುಮಾರ್ ತಿಪ್ಪೇಶ್ ಇದ್ದರು.

News By: Raghu Shikari 7411515737

Admin

Leave a Reply

Your email address will not be published. Required fields are marked *

error: Content is protected !!