ಶಿಕಾರಿಪುರ:ಸುರಗೊಂಡನಕೊಪ್ಪದಲ್ಲಿ ಆರ್ಎಸ್ಎಸ್ ಶಿಬಿರಕ್ಕೆ ರಾಘವೇಂದ್ರ ನಾಯ್ಕ್ ವಿರೋಧ
ಶಿಕಾರಿಪುರ:ಸುರಗೊಂಡನಕೊಪ್ಪದಲ್ಲಿ ಆರ್ ಎಸ್ಎಸ್ ಶಿಬಿರ ಸಂತ ಸೇವಾಲಲ್ ಜನ್ಮ ಭೂಮಿಯಲ್ಲಿ ನಡೆಯಬಾರದ್ದು ಎಂದು ಬಂಜಾರ ಸಮಾಜ ಯುವ ಘಟಕ ಅಧ್ಯಕ್ಷ ರಾಘವೇಂದ್ರ ನಾಯ್ಕ್ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿ ಮಾತನಾಡಿದ ಅವರು ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರು ಶಾಸಕರಾ ಪಿ ರಾಜೀವ್ ಅವರ ಆರ್ ಎಸ್ ಎಸ್ ಶಿಬಿರ ನಡೆಸಲು ಅನುಮತಿ
ನೀಡಿದ್ದಾರೆ.
ಆರ್ ಎಸ್ ಎಸ್ ಸಂಘಟನೆ ಮನುವಾದದ ಸಂತತಿ ನಮ್ಮ ಸಮಾಜಕ್ಕೂ ಆರ್ ಎಸ್ಎಸ್ ಸಿದ್ದಾಂತ ತದ್ವಿರುದ್ಧವಾಗಿದೆ ಅದಕ್ಕಾಗಿ ಆರ್ ಎಸ್ಎಸ್ ವಿಚಾರಧಾರೆ ಆಜೇಂಡಾ ಕೆಳ ಸಮುದಾಯದ ವಿರುದ್ಧ ಇದೆ.
ರಾಜೀವ್ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಇಡೀ ಬಂಜಾರ ಸಮಾಜ ಇದನ್ನು ವಿರೋಧಿಸುತ್ತದೆ ಇದನ್ನು ಕೂಡಲೇ ಕೈ ಬಿಡಬೇಕಾಗಿದೆ ಮಹಾ ಮಂಡಳಿಯ ಸಭೆ 21 ಸುರಗೊಂಡನಕೊಪ್ಪದಲ್ಲಿ ಈ ಕುರಿತು ರಾಜ್ಯದ ಸಮಾಜದ ಮುಖಂಡರ ಸಭೆ ಕರೆದು ಶಿಬಿರ ನಡೆಸುವುದು ಬೇಡ ಎಂದು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡರಾದ ಮಂಜುನಾಯ್ಕ್, ಚಂದ್ರಶೇಖರ್, ಗೋರ್ ಸೇನಾ,ಚನ್ನೇಶನಾಯ್ಕ್, ಮಂಜುನಾಯ್ಕ್, ಶ್ರೀಕಾಂತ್ ನಾಯ್ಕ್, ಪುನೀತ್ ನಾಯ್ಕ್, ಮಲ್ಲಿಕಾನಯ್ಕ್ ರಾಜುನಾಯ್ಕ್, ಇದ್ದರು.
News by: Raghu Shikari-7411515737