ಅಂಜನಾಪುರ-ಅಂಬ್ಲಿಗೊಳ ಜಲಾಶಯಕ್ಕೆ ಮಾಜಿ ಸಿಎಂ ಬಿ.ಎಸ್ ವೈ ಬಾಗಿನ ಅರ್ಪಣೆ
ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕುಟುಂಬ ಸಮೇತವಾಗಿ ಗಂಗಾ ಮಾತೆಗೆ ಪೂಜೆಯನ್ನು ಸಲ್ಲಿಸಿ, ಬಾಗಿನವನ್ನು ಅರ್ಪಿಸಿದರು.
ನಂತರ ತಾಲೂಕಿನ ಅಂಬಲಿಗೋಳ ಜಲಾಶಯಕ್ಕೆ ಪೂಜೆಯನ್ನು ಸಲ್ಲಿಸಿ, ಬಾಗಿನವನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರಾದ ಬಿ. ವೈ ವಿಜಯೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಕೆ.ಎಸ್ ಗುರುಮೂರ್ತಿ,ಶಾಸಕರಾದ ಹರತಾಳು ಹಾಲಪ್ಪ. ಬಿಜೆಪಿ ಜಿಲ್ಲಾಧ್ಯಕ್ಷರಾದ ಮೇಘರಾಜ್. ಮತ್ತಿತರ ಮುಖಂಡರು ಇದ್ದರು.
News By: Raghu Shikari-7411515737