ಶಿಕಾರಿಪುರ: ರೈತರ ಬೆಳೆಗೆ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಯನ್ನು ನೀಡಿಬೇಕು ಎಂದು ಉಳ್ಳಿ ದರ್ಶನ್ ಒತ್ತಾಯ…!
ಶಿಕಾರಿಪುರ ತಾಲೂಕಿನಲ್ಲಿ ಈಗಾಗಲೇ ರೈತರ ಬೆಳೆ ಕಟ್ಟಾವಿಗೆ ಬಂದಿದ್ದು ಸರ್ಕಾರ ಇಂದಿಗೂ ಕೂಡ ಬೆಂಬಲ ಬೆಲೆ ಘೋಷಿಸಿಲ್ಲ ಖರೀದಿ ಕೇಂದ್ರಗಳನ್ನು ತೆರೆದಿಲ್ಲ ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಪುರಸಭಾ ಸದಸ್ಯ ಉಳ್ಳಿ ದರ್ಶನ್ ಒತ್ತಾಯಿಸಿದರು.
ಶಿಕಾರಿಪುರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲೂಕಿನ ರೈತರಿಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಯಾವುದೇ ಒಂದು ಹಕ್ಕು ಪತ್ರ ನೀಡಿಲ್ಲ ಬಗರ್ ಹುಕ್ಕುಂ ಸಾಗುವಳಿ ರೈತರಿಗೆ ಹಕ್ಕು ಪತ್ರ ನೀಡುವಲಿ ಸರ್ಕಾರ ಕ್ರಮ ವಹಿಸಬೇಕು ಎಂದರು.
ಪಟ್ಟಣದಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದೆ ಕಳಪೆ ಕಾಮಗಾರಿ ನಡೆಯುತ್ತಿದೆ ಸಂಸದರು ಕೇವಲ ಕಮಿಷನ್ ಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು
ಕರೋನ ದಿಂದ ಸಂಕಷ್ಟದಲ್ಲಿ ಜನರು ಜೀವನ ನಡೆಸುತ್ತಿದ್ದು ಸಾಕಷ್ಟು ಜನರು ಕೆಲಸ ಬಿಟ್ಟು ಬಂದಿದ್ದಾರೆ ಅವರಿಗೆ ಉದ್ಯೋಗ ಕಲ್ಪಿಸಲು ನೆರವಾಗಬೇಕಾಗಿದೆ ಎಂದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಬೇಡ್ ಗಳ ಕೊರತೆ ಇದೆ ವಿದ್ಯುತ್ ದೀಪಗಳಿಲ್ಲ ರೋಗಿಗಳಿಗೆ ಸಮಸ್ಯೆ ಎದುರಾಗಿದೆ ಪಶು ಆಸ್ಪತ್ರೆಯಲ್ಲಿ ಔಷಧವಿಲ್ಲ ಕಾಯಂ ವೈಧ್ಯರು ಕೊರೆತೆ ಇದೆ ಇದನ್ನು ಪರಿಹಾರ ನಡೆಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಕಛೇರಿ ನಾಡ ಕಛೇರಿಗಳಲ್ಲಿ ಸಿಬ್ಬಂದಿಗಳ ಕೊರೆತೆ ಎದುರಾಗಿದೆ ತಹಶೀಲ್ದಾರ್ ಕೂಡಲೇ ಗಮನ ನೀಡಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಕುರಿಗಾಯಿಗಳ ಕುರಿಗಳು ಸಾವನ್ನಪ್ಪಿದ್ದು ಅದಕ್ಕೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ
ಪೆಟ್ರೋಲ್ ಡಿಸೇಲ್ ಗ್ಯಾಸ್ ಸಿಲೆಂಡರ್ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನರು ಬೇಸತ್ತು ಕಾಂಗ್ರೆಸ್ ಪರ ಬೆಂಬಲ ನೀಡಿದ್ದಾರೆ ಹಾನಗಲ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ್ದು ಉದಾಹರಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ತಾಲ್ಲೂಕ್ ಪ್ರ.ಕಾ ಪಾಲಕ್ಷಪ್ಪ ಬಡಗಿಕ,ಕಾಂಗ್ರೆಸ್ ಮುಖಂಡರಾದ ರೇಣುಕಸ್ವಾಮಿ , ದಯಾನಂದ ಗಾಮ, ನಾಗರಾಜ್ ನಾಯ್ಕ್,ರಾಜು,ಇದ್ದರು.
News by: Raghu shikari-7411515737