ತ್ರಿಕ್ (ಸೊಂಟ-ಬೆನ್ನು-ಕತ್ತು) ಶೂಲೆ ಮತ್ತು ಅದರ ಶಾಶ್ವತ ಪರಿಹಾರ. ಭಾಗ-4

ತ್ರಿಕ್ (ಸೊಂಟ-ಬೆನ್ನು-ಕತ್ತು) ಶೂಲೆ ಮತ್ತು ಅದರ ಶಾಶ್ವತ ಪರಿಹಾರ. ಭಾಗ-4

🌼ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ🌼 🌿ಸ್ವಾಸ್ಥ್ಯ ಸರ್ವರದ್ದೂ ಆಗಲಿ🌿

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ

✍️: ಇಂದಿನ ವಿಷಯ:
ತ್ರಿಕ್ (ಸೊಂಟ-ಬೆನ್ನು-ಕತ್ತು) ಶೂಲೆ ಮತ್ತು ಅದರ ಶಾಶ್ವತ ಪರಿಹಾರ.
ಭಾಗ-4

🌿 ತ್ರಿಕ್ ಶೂಲಕ್ಕೆ ಆಯುರ್ವೇದ ಚಿಕಿತ್ಸೆ ಅತ್ಯಂತ ಶ್ರೇಷ್ಠ.

📜 ವಾತಸ್ಯೋಪಕ್ರಮಃ ಸ್ನೇ ಹ ಸ್ವೇದ..,ಸ್ನಿಗ್ಧೋಷ್ಣಾ ಬಸ್ತಯೋ………ಸ್ನೇಹಸ್ಯ ….. ತೈಲಾನುವಾಸನಮ್||01-03||

  • ಅಷ್ಟಾಂಗ ಹೃದಯ

🔅 ಬೆನ್ನಿನ ಸ್ನಾಯುಗಳು ಒಣಗಲು ಕಾರಣವೇನು?
ಒಣಗಿಸುವ ಗುಣವಿರುವ ವಾತ ಸ್ನಾಯುಗಳನ್ನು ಒಣಗಿಸುತ್ತದೆ.
(ಉದಾ: ಚಳಿಗಾಲದಲ್ಲಿ ಬಟ್ಟೆಗಳೂ, ನಮ್ಮ ಚರ್ಮವೂ ಗಾಳಿಗೆ ಬಹು ಬೇಗ ಒಣಗಲು ಕಾರಣ ಶೀತ ಮತ್ತು ರೂಕ್ಷ(ಒಣಗುವಿಕೆ) ಗುಣ.

◾️ ಸ್ನೇಹ ಚಿಕಿತ್ಸೆ:
👉 ತ್ರಿಕಾದಿ ಸರ್ವ ಸಂಧಿಗಳನ್ನು ಒಣಗಿಸುವ ವಾತಕ್ಕೆ, ಹಸಿ ಮಾಡುವುದೇ ಚಿಕಿತ್ಸೆ. ವಿಧಿಪೂರ್ವಕ ಸ್ನೇಹ ಪ್ರಯೋಗ ಮಾತ್ರ ಎಲ್ಲಾ ಸ್ನಾಯು, ಮಾಂಸಖಂಡ, ಸಂಧಿಗಳನ್ನು ಹಸಿ ಮತ್ತು ಮೃದುವಾಗಿಸುತ್ತದೆ.

◾️ ಸ್ವೇದ ಚಿಕಿತ್ಸೆ:
👉 ಶೀತದಿಂದ ಸಂಕೋಚಗೊಂಡ ಸ್ನಾಯುಗಳು ಉಷ್ಣ ಚಿಕಿತ್ಸೆಯಿಂದ ವಿಕಾಸಗೊಳ್ಳುತ್ತವೆ.

ವಾತಜನ್ಯ ವ್ಯಾಧಿಗಳಿಗೆ ಪ್ರಮುಖ ಚಿಕಿತ್ಸೆಯಾದ ಸ್ನೇಹನ-ಸ್ವೇದನ ಗಳನ್ನು ವೈದ್ಯರು ಅನೇಕ ವಿಧಿವಿಧಾನಗಳಿಂದ ಮಾಡುತ್ತಾರೆ.

◾️ ಕಟಿಬಸ್ತಿ, ಪೃಷ್ಠಬಸ್ತಿ ಚಿಕಿತ್ಸೆ:
(ಸ್ನೇಹ-ಸ್ವೇದಗಳ ಮಿಶ್ರಣ)
👉 ವಾತ ಶಾಮಕ ಔಷಧಿ ಸಿದ್ಧ ತಿಲತೈಲ ಬಳಸಿ ಸ್ನಿಗ್ಧಗೊಳಿಸುತ್ತಾರೆ. ಅದೇ ತೈಲವನ್ನು ಬಿಸಿಮಾಡಿ(This is not dry heat like hot water bag, IR heat etc.,) ಸ್ನಾಯು ಸಂಕೋಚಗಳನ್ನು ನಿವಾರಿಸುತ್ತಾರೆ. ಶೇ 90ರಷ್ಟು ಅವಸ್ಥೆಗಳಲ್ಲಿ ಇಷ್ಟು ಸಾಕು.

◾️ ಶಮನ ಚಿಕಿತ್ಸೆ:
👉 ವಾತ ಉತ್ಪತ್ತಿಯಾಗುವ ಮೂಲ ಸ್ಥಾನದಲ್ಲೇ ಶಮನಗೊಳಿಸುವ ಈ ಚಿಕಿತ್ಸೆ ಅತ್ಯಂತ ಮಹತ್ವದ್ದು. ಇದು ಮಲಪಾಚನ, ವಾತ ಶಮನ ಮತ್ತು ವಾತ ಹೊರಹಾಕುವ ಅನುಲೋಮನ ಮಾಡುತ್ತದೆ.

☑️ ಆಹಾರ-ವಿಹಾರದಲ್ಲಿ ಬದಲಾವಣೆ:
ಬಹಳ ಜನ ಆಯುರ್ವೇದ ಎಂದರೆ ಪಥ್ಯ ಎನ್ನುತ್ತಾರೆ. ಆದರೆ ಪಥ್ಯಾಹಾರವು ವಿಕೃತಿಗೊಂಡ ನಿಮ್ಮ ಶರೀರಕ್ಕೇ ಹೊರತು ಆಯುರ್ವೇದ ಔಷಧಿಗಳಿಗಾಗಿ ಅಲ್ಲ.

ಆಹಾರ-ವಿಹಾರಗಳನ್ನು ಸರಿಮಾಡದೇ ಯಾವ ಚಿಕಿತ್ಸೆಯೂ ಪೂರ್ಣವಲ್ಲ ಹಾಗೂ ಯಾವ ವ್ಯಾಧಿಯೂ ಶಾಶ್ವತ ಪರಿಹಾರವಾಗಲು ಸಾಧ್ಯವಿಲ್ಲ.
⤴️ ಇದೇ ಆಯುರ್ವೇದದ ಗುಟ್ಟು.

◾️ ದಾರುಣ ಮತ್ತು ದೀರ್ಘಕಾಲದ ತ್ರಿಕ್ ಶೂಲೆಗಳ ಚಿಕಿತ್ಸೆ:
👉 ತೀವ್ರ ಮತ್ತು ಬಹುಕಾಲದ ತ್ರಿಕ್ ಶೂಲೆಗೆ, ವಿರೇಚನ, ನಿರೂಹ, ಅನುವಾಸನ ಮುಂತಾದ ಸೂಕ್ಷ್ಮ ಮತ್ತು ಶಕ್ತಿಯುತ ಪಂಚವಿಧ ಶೋಧನ-ಶಮನ-ಪೋಷಣೆಗಳಂತಹ ಪರಿಪೂರ್ಣ ಚಿಕಿತ್ಸೆಗಳನ್ನು ತಜ್ಞ ವೈದ್ಯರು ಮಾಡುತ್ತಾರೆ.

👁 ಜನರ ಸಂದೇಹಗಳು:
ಅನೇಕರು ಆಯುರ್ವೇದದ ಬಗ್ಗೆ ಅತಿಯಾದ ಸಂದೇಹದಿಂದ ಚಿಕಿತ್ಸೆಗೆ ಬರುತ್ತಾರೆ. ಯಾವ ದುಷ್ಪರಿಣಾಮಗಳೂ ಇಲ್ಲದೇ ಅತ್ಯಂತ ಸಮರ್ಥವಾಗಿ ಚಿಕಿತ್ಸೆ ಮಾಡುವುದು ಎಲ್ಲಾ ಆಯುರ್ವೇದ ವೈದ್ಯರ ಉದ್ದೇಶ. ಇವರೂ ಸಹ ಪಂಚಕರ್ಮ ಚಿಕಿತ್ಸಾ ಮಹತ್ವವನ್ನರಿತು, ಆಯಾ ತಜ್ಞರ ಸಲಹೆ ಪಡೆಯುತ್ತಾರೆ. ಅಂತಹುದರಲ್ಲಿ ಆಯುರ್ವೇದದ ಹೆಸರಿನಲ್ಲಿ ಕೇವಲ ಮಸಾಜ್ ಮಾಡುವವರೂ, ವೈದ್ಯರಲ್ಲದವರೂ, ಯೋಗ ತರಬೇತಿದಾರರೂ, ಗುರುಗಳ ಹೆಸರನ್ನಿಟ್ಟುಕೊಂಡವರೂ ತಮಗೆ ತಿಳಿದಂತೆ ಪಂಚಕರ್ಮ ಮಾಡುತ್ತಿದ್ದಾರೆ. ಇಂಥವರ ಬಳಿ ಚಿಕಿತ್ಸೆಗೆ ತೆರಳಿ ತೊಂದರೆಗೊಳಗಾಗುವ ಮೊದಲು ಎಚ್ಚರದಿಂದಿರಿ.

ಆಯುರ್ವೇದದಲ್ಲಿ ಬೇಗ ಗುಣವಾಗುವುದಿಲ್ಲ ಎಂಬ ಸಾಮಾನ್ಯವಾಗಿ ಹರಿದಾಡುವ ಮಿಥ್ಯೆಯನ್ನು ನಂಬಿದ್ದರೆ ಗಮನಿಸಿ- ಕೇವಲ ಅರ್ಧ ಗಂಟೆಯ ಒಂದು ಚಿಕಿತ್ಸೆಯಿಂದ ಹೊತ್ತುಕೊಂಡು ಬಂದವರನ್ನು ನಡೆಸಿ ಕರೆದುಕೊಂಡು ಹೋದ ಅನೇಕ ಉದಾಹರಣೆಗಳು ನಮ್ಮ ಕೇಂದ್ರದಲ್ಲೇ ಇವೆ.
ನಮ್ಮ ಶರೀರವೊಂದು ಜೀವಂತ ವ್ಯವಸ್ಥೆ, ಹಳೆಯ ತೊಂದರೆ ಸರಿಪಡಿಸಿಕೊಳ್ಳಲು ಮತ್ತು ನೈಸರ್ಗಿಕವಾಗಿ ಬೆಳೆಯಲು ತನ್ನದೇ ಆದ ಸಮಯ ಬೇಕು, ನಮ್ಮ ಆತುರಕ್ಕೆ ಮಗುವೊಂದು ಒಮ್ಮೆಗೇ ಯುವಕನಾಗಲಾರದು.

👉 ಆತುರತೆಯೇ?:
ಅಲೋಪಥಿ ಆಸ್ಪತ್ರೆಗಳಲ್ಲಿ ಬೇರೆ ಬೇರೆ ಡಿಪಾರ್ಟ್ ಮೆಂಟ್ ಗಳನ್ನು ತೋರಿಸಿ ನಮ್ಮ ವಿಭಾಗದ ಕೆಲಸ ಆಗಿದೆ, ಅವರ ವಿಭಾಗಕ್ಕೆ ಹೋಗಿ! ಎನ್ನುವುದನ್ನು ಸಾಮಾನ್ಯವಾಗಿ ಕೇಳುತ್ತೇವೆ. ಒಂದು ಚಿಕಿತ್ಸೆಗೆ ಇನ್ನೊಂದು ವ್ಯಾಧಿ ಬಳುವಳಿಯಾದರೆ ತೊಂದರೆ ಅನುಭವಿಸುವ ಶರೀರ ಯಾರದು?
(ಉದಾ: ಅಲರ್ಜಿಕ್ ಕಾಯಿಲೆಗಳಿಗೆ ಕೊಡುವ ಸಣ್ಣ ಔಷಧಗಳೂ ಮೂಳೆ ಸವೆತ ಮಾಡಿ ಮೂಳೆ ತಜ್ಞರತ್ತ ಹೊರಳಿಸುತ್ತವೆ, ಮುಟ್ಟಿನ ತೊಂದರೆಯ ಹಾರ್ಮೋನ್ ಚಿಕಿತ್ಸೆ ಸ್ಥೌಲ್ಯ, ಮಧುಮೇಹ ತರುತ್ತವೆ. ಇದು ವೈದ್ಯರಿಗೆ ಸ್ಪಷ್ಟವಾಗಿ ಗೊತ್ತಿದೆ, ಆದರೆ ಆ ವಿಜ್ಞಾನದ ಸೀಮಿತತೆ ಅಷ್ಟೇ. ಆದರೂ ಅದು ಚಿಕಿತ್ಸೆಯ ಬಳುವಳಿ ಎಂದು ನಾವು ಒಪ್ಪದಂತೆ ಇರುವುದು ಆಶ್ಚರ್ಯ!!!

ಆಯುರ್ವೇದ ವೈದ್ಯ ರೋಗಿ ಹೇಳಿದ ತೊಂದರೆಯನ್ನಷ್ಟೇ ಅಲ್ಲದೇ ಎಲ್ಲಾ ಸಮಸ್ಯೆಗಳ ಇತಿಹಾಸ ಪಡೆದು, ಎಲ್ಲವನ್ನೂ ಗಮನಿಸಿ, ಒಂದೇ ಚಿಕಿತ್ಸೆಯಲ್ಲಿ ಹಲವಾರು ವ್ಯಾಧಿಗಳನ್ನು ಗುಣಪಡಿಸುತ್ತಾನೆ. ಇದಕ್ಕೆ ತನ್ನದೇ ಸಮಯ, ನಿಷ್ಠೆ ಬೇಕಾಗುತ್ತದೆ.

ಆಯುರ್ವೇದದಿಂದ ಗುಣ ಪಡಿಸಿಕೊಂಡ ತ್ರಿಕ್ ಶೂಲಗಳು ಅಪಾಯರಹಿತ, ದೀರ್ಘಕಾಲಿಕ ಪರಿಹಾರ. ಶಸ್ತ್ರಚಿಕಿತ್ಸೆಗೆ ಹೋಗುವ ಬದಲು ಮನೆಯಲ್ಲೇ ವಿರಮಿಸಿ, ಆಯುರ್ವೇದದ ಉಪದೇಶ ಪಾಲಿಸಿ ಶೇ 90ರಷ್ಟು ವ್ಯಾಧಿಗಳು ವಾಸಿಯಾಗುತ್ತವೆ. ಆಗದಿದ್ದರೆ ಮಾತ್ರ ಔಷಧೋಪಚಾರಗಳು ಮತ್ತು ಪಂಚಕರ್ಮ ಮುಂತಾದ ಚಿಕಿತ್ಸೆಗಳು ಬೇಕು.

8792290274
9148702645

ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ

Admin

Leave a Reply

Your email address will not be published. Required fields are marked *

error: Content is protected !!