ಶಿಕಾರಿಪುರ : ಜನ ಜಾನುವಾರುಗಳ ಮೇಲೆ‌ ಚಿರತೆ ಅಟ್ಯಾಕ್ ಗ್ರಾಮಸ್ಥರಲ್ಲಿ ಆತಂಕ..!

ಶಿಕಾರಿಪುರ : ಜನ ಜಾನುವಾರುಗಳ ಮೇಲೆ‌ ಚಿರತೆ ಅಟ್ಯಾಕ್ ಗ್ರಾಮಸ್ಥರಲ್ಲಿ ಆತಂಕ..!

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಮದಗ ಹಾರನಳ್ಳಿ ಗ್ರಾಮದಲ್ಲಿ ಶನಿವಾರ ಮದ್ಯಾಹ್ನ 2 ಗಂಟೆಗೆ ಗ್ರಾಮದಲ್ಲಿ ಚಿರತೆಯೊಂದು ನುಗ್ಗಿದೆ.

ಮದಗ ಹಾರನಳ್ಳಿ ಗ್ರಾಮದ ಜನರು ಚಿರತೆಯ ಗ್ರಾಮದ ಜನ ಜಾನುವಾರುಗಳ ಮೇಲೆ ದಾಳಿ‌ ನಡೆಸಿರುವ ವಿಚಾರ ತಿಳಿದು ಭಯಭೀತಗೊಂಡಿದ್ದಾರೆ.

ಜನ ಜಾನುವಾರಗಳ ಮೇಲೆ ಚಿರತೆ ದಾಳಿ:

ಮದಗ ಹಾರನಹಳ್ಳಿ ಗ್ರಾಮದ ಬೂದಿಗೌಡ್ರು ಸಿದ್ದಣ್ಣಗೌಡರ ಒಂದು ಹಸು, ಪರಸಪ್ಪ ಮಾದಕರ ಅವರ ಒಂದು ಹಸು ಮೇಲೆ ಚಿರತೆ ಮಾರಣಾಂತಿಕವಾಗಿ ದಾಳಿ ಮಾಡಿದೆ.

ಶಿವಪ್ಪ ಹೊನ್ನಂಬಳಿ ಅವರ ಎಮ್ಮೆಯನ್ನು ತಿಂದುಬಿಟ್ಟಿದಲ್ಲದೆ ಶಿವಪ್ಪ ನಾಗವಾರ್ ಎಂಬ ವ್ಯಕ್ತಿಯ ಮೇಲೆ ಕೂಡ ಮಾರಣಾಂತಿಕವಾಗಿ ಚಿರತೆ ದಾಳಿ ಮಾಡಿದೆ.

“ಘಟನೆ ಕುರಿತು ತಕ್ಷಣ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಎರಡು ದಿನಾವಾದರು ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲಹಾಗೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ “ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅರಣ್ಯ ಇಲಾಖೆ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ .

News by: Naveen Yuva-9611127707

Admin

Leave a Reply

Your email address will not be published. Required fields are marked *

error: Content is protected !!