ಕರೋನ ಪರಿಹಾರ ಕಾರ್ಯಕ್ಕೆ ಸಚಿವ ಕೆ.ಎಸ್ ಈಶ್ವರಪ್ಪ ಕೊಟ್ರು ನಾಲ್ಕು ತಿಂಗಳ ವೇತನ..!
ಶಿವಮೊಗ್ಗ: ಇಡೀ ವಿಶ್ವವೇ ಕರೋನ ಮಹಾಮಾರಿ ತತ್ತರಿಸಿ ಹೋಗಿದ್ದು ಜನ ಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಯವರು ಮುಂದಾಗುತ್ತಿದ್ದು ಇಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್ ಈಶ್ವರಪ್ಪ ಮತ್ತು ಅವರ ಪುತ್ರ ಕೆ.ಇ ಕಾಂತೇಶ್ ತಮ್ಮ ನಾಲ್ಕು ತಿಂಗಳ ವೇತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
ಸಚಿವ ಕೆ.ಎಸ್ ಈಶ್ವರಪ್ಪನವರ ನಾಲ್ಕು ತಿಂಗಳ ವೇತನ 5.34 ಲಕ್ಷ ನೀಡಿದ್ದು ಕೆ.ಇ ಕಾಂತೇಶ್ ಅವರ ನಾಲ್ಕು ತಿಂಗಳ ಜಿಲ್ಲಾ ಪಂಚಾಯತ್ ಸದಸ್ಯರ ವೇತನ 20 ಸಾವಿರ ರೂಗಳನ್ನು ಚೇಕ್ ಜಿಲ್ಲಾಧಿಕಾರಿಗಳ ಮೂಲಕ ನೀಡಿದರು.